ಕರ್ನಾಟಕ ಬಂದ್​ಗೆ ಜೆಡಿಎಸ್​​ನಿಂದ​ ಸಂಪೂರ್ಣ ಬೆಂಬಲ-ಹೆಚ್​.ಡಿ.ದೇವೇಗೌಡ

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಭೂ-ಸುಧಾರಣೆ ತಿದ್ದುಪಡಿ ವಿಧೇಯಕದ ವಿರುದ್ಧ ರಾಜ್ಯದ ರೈತ ಸಂಘಗಳು ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ನಾಳಿನ ಕರ್ನಾಟಕ ಬಂದ್​ಗೆ ಜೆಡಿಎಸ್​ ಬೆಂಬಲ ಸೂಚಿಸಿದೆ.

ರಾಜ್ಯ ಸರ್ಕಾರ ಜಾರಿ ಮಾಡಿರುವ ಭೂ-ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯದ ರೈತ ಸಂಘಗಳು ಹಾಗೂ ಅನೇಕ ಸಂಘಟನೆಗಳು ಹಮ್ಮಿಕೊಂಡಿರುವ ನಾಳಿನ ರಾಜ್ಯಾದ್ಯಂತ ಬಂದ್ ಗೆ ನಮ್ಮ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಮಾಧ್ಯಮಗಳ ಮುಖೇನ ತಿಳಿಸಲು ಇಚ್ಛೆಪಡುತ್ತೇನೆ. 
-ಹೆಚ್.ಡಿ. ದೇವೇಗೌಡ, ಮಾಜಿ ಪ್ರಧಾನ ಮಂತ್ರಿ

ಇನ್ನು ಈ ಬಗ್ಗೆ ಜೆಡಿಎಸ್​​ ವಿಧಾನ ಪರಿಷತ್​ ಸದಸ್ಯ ಶ್ರೀಕಂಠೇ ಗೌಡ ನ್ಯೂಸ್​ಫಸ್ಟ್​ ಜೊತೆ ಮಾತನಾಡಿ.. ರೈತ ವಿರೋಧಿ ಕಾನೂನುಗಳ ವಿರುದ್ಧ ಮೊದಲು ಧ್ವನಿ ಎತ್ತಿದವರು ದೇವೇಗೌಡರು. ನಾಳೆ ಕರ್ನಾಟಕ ಬಂದ್​ಗೆ ಜೆಡಿಎಸ್​ನಿಂದ ಸಂಪೂರ್ಣ ಬೆಂಬಲ ಇದೆ. ರೈತರ ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡಲು ನಾವು ಸಿದ್ಧರಿದ್ದೇವೆ. ಈ ಬಗ್ಗೆ ಎರಡು ಸದನದಲ್ಲಿ ನಾವು ಕೂಡ ನಿರಂತರ ಹೋರಾಟ ಮಾಡುತ್ತ ಬಂದಿದ್ದೇವೆ. ಸರ್ಕಾರ ಮಸೂದೆಯನ್ನು ವಾಪಸ್​ ಪಡೆಯುವವರೆಗೂ ವಿರೋಧಿಸುತ್ತೇವೆ ಎಂದಿದ್ದಾರೆ.

Post a Comment

Previous Post Next Post