ಹಾಸನ.ಜೂ.11:- ಜಿಲ್ಲಾ ಆಯುಷ್ ಕಚೇರಿ ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಲು ಆಯುಷ್ ಕಿಟ್ಗಳನ್ನು ವಿತರಿಸಿದರು.
ಹಿರಿಯ ವಿಭಾಗೀಯ ನಿಯಂತ್ರಾಣಾಧಿಕಾರಿ ರಾಜೇಶ್ಶೆಟ್ಟಿ, ಕಾರ್ಮಿಕ ಕಲ್ಯಾಣಾಧಿಕಾರಿ ಪ್ರಕಾಶ್ ಎಂ.ಪಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ|| ವೀಣಾಲತಾ ಎ., ನೋಡೆಲ್ ಅಧಿಕಾರಿ ಡಾ|| ಮೂಸೇಬ್ಯಾರಿ, ಡಾ|| ಲತಾ ಆರ್.ಹೆಚ್, ಡಾ|| ಅದೀಬುಲ್ಲಾ, ಡಾ|| ರವೀಂದ್ರ.ಜಿ.ಎಸ್, ಡಾ|| ಸುಜಾತ ಎಸ್. ಕೊಣ್ಣೂರು, ಡಾ|| ನಗೀನಾ ಯಲಗುರದಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Tags
ಹಾಸನ