ಅರಕಲಗೂಡು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನ ಮುಂಭಾಗದ ಚಕ್ರಕಳಚಿ ಬಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲ್ಲೂಕಿನ ದೊಡ್ಡಮಗ್ಗೆ ಬಳಿ ಶನಿವಾರ ಸಂಜೆ 6 ಗಂಟೆ ಸಮಯದಲ್ಲಿ ಸಂಭವಿಸಿದೆ.
ಕೊಣನೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ವಾಹನದ ಮುಂಭಾಗದ ಚಕ್ರ ದೀಡೀರ್ ಕಳಚಿಕೊಂಡಿತು. ಕೂಡಲೆ ಪರಿಸ್ಥಿತಿಯನ್ನು ಅರಿತ ಚಾಲಕ ನವೀನ್ ವಾಹನವನ್ನು ನಿಯಂತ್ರಿಸಿ ನಿಲುಗಡೆಮಾಡುವಲ್ಲಿ ಯಶಸ್ವಿಯಾದರು. ಹೀಗಾಗಿ ಬಸ್ನೊಳಗೆ ಇದ್ದ 22 ಮಂದಿ ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ಪಾರಾದರು.
Tags
ಅರಕಲಗೂಡು