ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಸುಸಜ್ಜಿತ ಬಡಾವಣೆ ಎಂದು ಹೆಸರು ಮಾಡಿರುವ ಎಸ್.ಎಂ.ಕೃಷ್ಣ ನಗರದ ನಿವಾಸಿಗಳ ಕರ್ಮವನ್ನು ಕೇಳುವರು ಯಾರು ಇಲ್ಲ. ಹೆಸರಿಗೆ ಮಾತ್ರ ಉತ್ತಮ ಸುಸಜ್ಜಿತ ಎಂದು ಕೇವಲ ಹೆಸರಿಗೆ ಮಾತ್ರ ಕರೆಯುವ ಎಸ್.ಎಂ.ಕೃಷ್ಣ ನಗರದಲ್ಲಿ ಈಗ ಕಟ್ಟಿರುವ ಹಾಗೂ ಕಟ್ಟುತ್ತಿರುವ ಮನೆಗಳಿಗೆ ದಿನ ಬಳಕೆಗೆ ಬೇಕಾಗಿರುವ ಮೂಲಭೂತ ಸೌಕರ್ಯ ವಿದ್ಯುತ್ ಮತ್ತು ನೀರು ಸಹ ನೀಡದೆ ನಾಗರೀಕರಿಗೆ ಪ್ರಾಧಿಕಾರದಿಂದ ತೊಂದರೆಗಳು ಆಗುತ್ತದ್ದು ಜೊತೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ನಿವಾಸಿಗಳು ತಮ್ಮ ಗೋಳನ್ನು ಹಂಚಿಕೊಂಡಿದ್ದಾರೆ.
Tags
ಹಾಸನ