ಹಾಸನ.ಜೂ.12:- ಜಿಲ್ಲೆಯಲ್ಲಿ ಕೋವಿಡ್-19 ಹಿನ್ನಲೆಯಲ್ಲಿ ಹೂ, ಹಣ್ಣು, ತರಕಾರಿ ಬೆಳೆಗಳ ನಷ್ಟ ಅನುಭವಿಸಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಹೂ, ಹಣ್ಣು, ತರಕಾರಿ ಬೆಳೆಗಾರರಿಗೆ ಪರಿಹಾರ ಧನ ವಿತರಣೆ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಈವರೆಗೆ ಬೆಳೆ ಸಮೀಕ್ಷೆ ಒಳಗೊಂಡವರು ಮತ್ತು ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಿರುವ ರೈತರ ಸ್ಥಳ ಸಮೀಕ್ಷೆಯನ್ನು ಪೂರ್ಣಗೊಳಿಸಿ ಜೊತೆಗೆ ಅರಿವಿನ ಕೊರತೆಯಿಂದ ಇನ್ನೂ ಅರ್ಜಿ ಸಲ್ಲಿಸಿದೆ ಇರುವವರಿಗೆ ಮತ್ತೋಂದು ಅವಕಾಶ ನೀಡಿ ಅರ್ಜಿ ಸ್ವೀಕರಿಸಿ ಎಂದು ಹೇಳಿದರು.
ಸ್ಥಳ ಪರಿಶೀಲನಾ ವರದಿಯಂತೆ ಈವರೆಗೆ 1525 ಬೆಳೆಗಾರರು 314.17 ಲಕ್ಷ ಹೆಕ್ಟರ್ನಲ್ಲಿ ಬೆಳೆದ ಹೂವಿನ ಬೆಳೆಗೆ ನಷ್ಠದ ರೂಪದಲ್ಲಿ 78.54 ಲಕ್ಷ ರೂಪಾಯಿ ಪರಿಹಾರ ವಿತರಿಸಬೇಕಾಗಿದೆ ಅಲ್ಲದೆ ಇದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅದರ ಜೊತೆಯಲ್ಲೆ ಇನ್ನು ಅರ್ಜಿ ಸಲ್ಲಿಸಲು ಬಿಟ್ಟು ಹೋಗಿರುವವರ ಸಂಕಷ್ಟಕ್ಕೆ ಸಿಲುಕಿದ ಫಲಾನುಭವಿಗಳನ್ನು ಗುರುತಿಸಿ ಅವರಿಗೂ ಪರಿಹಾರ ಒದಗಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಂದರ್ಭದಲ್ಲಿ ಮುಂದೆ ಬರಲಿರುವ ಮನವಿ ಹಾಗೂ ಅದಕ್ಕೆ ಬೇಕಾಗಬಹುದಾದ ಅಂದಾಜು ಮೊತ್ತವನ್ನು ಪ್ರತ್ಯೇಕವಾಗಿ ನಮೂದಿಸಿ ಸಲ್ಲಿಸುವಂತೆ ಅವರು ನಿರ್ದೇಶನ ನಿಡಿದರು.
ಇದೇ ರೀತಿ ಹಣ್ಣು ಮತ್ತು ತರಕಾರಿ ಬೆಳೆಗಳಿಗೂ ಪರಿಹಾರ ಘೋಷಣೆಯಾಗಿದೆ ಇದರಲ್ಲಿಯೂ ಸಹ ಬೆಳೆ ಸಮೀಕ್ಷೆಗೆ ಸೇರ್ಪಡೆಗೊಳ್ಳದ ಬೆಳೆಗಾರರ ತಾಕುಗಳನ್ನು ಗುರುತಿಸಿ ಅವರಿಂದ ಜೂ.18 ರೊಳಗೆ ಅರ್ಜಿ ಸ್ವೀಕರಿಉಸಿ ಹೊಬಳಿ ಹಾಗೂ ನತಾಲ್ಲೂಕು ಮಟ್ಟದ ಪರಿಶೀಲನೆ ಪೂರ್ಣಗೊಳಿಸಿ ಜೂ.20 ಒಳಗಾಗಿ ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಿ ಎಮದು ಜಿಲ್ಲಾಧಿಕಾರಿಯವರು ತಹಶೀಲ್ದಾರರು ಹಾಗೂ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತೋಟಗಾರಿಕಾ ಉಪ ನಿರ್ದೇಶಕರಾದ ಡಾ|| ಮಂಜುನಾಥ್ ಅವರು ಮಾತನಾಡಿ ಬೆಳೆ ಸಮೀಕ್ಷೆ ಹಾಗೂ ಸ್ಥಳ ಪರಿಶೀಲನಾ ವರದಿಯನ್ವಯ ಒಟ್ಟಾರೆ 1731 ರೈತರ 351.29 ಹೆಕ್ಟೆರ್ ಪ್ರದೇಶದ ಬೆಳೆ ಹಾನಿಗೆ 87.82 ಲಕ್ಷ ರೂಪಾಯಿ ಅನುದಾನ ಅಗತ್ಯ ಇದೆ ಎಂದರು. ಇದಲ್ಲದೆ ಜಿಲ್ಲೆಯಲ್ಲಿ 358.21 ಹೆಕ್ಟೆರ್ನಲ್ಲಿ ಹಣ್ಣಿನ ಬೆಳೆಗಳ ನಾಶ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ ಇದರಲ್ಲಿ ಬಾಳೆ,ಪಪ್ಪಾಯ, ಅಂಜೂರ, ಅನಾನಸ್, ಕಲ್ಲಂಡಿ ಹಣ್ಣು ಸೇರಿವೆ ತುರ್ತಾಗಿ ಪಪ್ಪಾಯ, ಅಂಜೂರ ಅನಾನಸ್ ಬೆಳೆಗಳ ಸಮೀಕ್ಷೆ ಪೂರ್ಣಗೊಳಿಸಬೇಕಾಗಿದೆ ಎಂದರು.
ಬೂದುಗುಂಬಳ ಸೇರಿದಂತೆ ಹಲವು ರೀತಿಯ ತರಕಾರಿ ಬೆಳೆಗಾರರು ನಷ್ಟ ಅನುಭವಿಸಿದ್ದು ಬೆಳೆ ಸಮೀಕ್ಷೆಯಲ್ಲಿ ನಮೂದಾಗದೆ ಇರುವವರ ಅರ್ಜಿಗಳನ್ನು ಸ್ವೀಕರಿಸಿ ತುರ್ತಾಗಿ ಸರ್ಕಾರಕ್ಕೆ ವರದಿ ನೀಡಬೇಕಾಗಿದ್ದು ಜೂ.18 ರೊಳಗೆ ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಸಭೆಯಲ್ಲಿ ಪಾಲ್ಗೊಂಡು ಹಲವು ಸಲಹೆ ನಿರ್ದೇಶನಗಳನ್ನು ನೀಡಿದರು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಸಭೆಯಲ್ಲಿ ಹಾಜರಿದ್ದರು.
Tags
ಹಾಸನ