ಹಾಸನ: ಈ ಕೂಸು ಆಕಸ್ಮಿಕವಾಗಿ ಬಂದಿರುವ ಕೂಸಾಗಿದೆ ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡರ ವಿರುದ್ಧ ಕಿಡಿಕಾರಿದ ಅವರು, ಅಭಿವೃದ್ಧಿಗೆ ಮತ್ತೆ ನಾನೆ ಬರಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ತಿರುಗೇಟು ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಶಾಸಕರು ಇದ್ಯಾವೊದೋ ಆಕಸ್ಮಿಕವಾಗಿ ಬಂದಿರುವ ಕೂಸು ಎಂದು ವ್ಯಂಗ್ಯವಾಡಿದರು. ಹಾಸನ ಜಿಲ್ಲೆಯಲ್ಲಿ 1962ನೆ ಸಾಲಿನಿಂದ ದೇವೆಗೌಡರು ಸೋಲು ಗೆಲುವು ನೋಡಿದ್ದಾರೆ. ಮಾಜಿ ಶಾಸಕ ದಿವಂಗತ. ಹೆಚ್.ಎಸ್. ಪ್ರಕಾಶ್ ರನ್ನು ಹಾಸನ ಜನತೆ 4 ಬಾರಿ ಗೆಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹೊಸ ಕೆಲಸ ವಿಮಾನ ನಿಲ್ದಾಣ ಕಾಮಗಾರಿ ಮಾಡಲಿ, 100 ಕೋಟಿ ವೆಚ್ಚದ ಜಿಲ್ಲಾ ಕೋರ್ಟ್ ಸ್ಥಾಪಿಸಿದ್ದೇನೆ. ಕೆಲವರು ಹಾಸನ, ಮಂಡ್ಯ ಬಜೆಟ್ ಎಂದು ಚಪ್ಪಾಳೆ ತಟ್ಟಿದವರು ಹಾಸನದಲ್ಲಿ ಯಾವ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ. ನಮ್ಮ ಕೈಯಲ್ಲಿ ಚಿನ್ನದ ಲೇಪನ ಮಾಡಲು ಆಗಲಿಲ್ಲ ಅವರೇ ಲೇಪನ ಮಾಡಲಿ ಎಚಿದ ಅವರು, ನಾನು ಕಟ್ಟಿರುವ ನರ್ಸಿಂಗ್ ಶಾಲೆ ಮತ್ತು ಕಟ್ಟಡಗಳಿಗೆ ಬಣ್ಣ ಹ್ರೆಡೆಯಲಿ ಎಂದು ಟಾಂಗ್ ನೀಡಿದರು. ಪ್ರೀತಂ ಜೆ. U್ಷಡ ಅರೋಪಕ್ಕೆ ನಾನು ಉತ್ತರ ನೀಡುವುದಿಲ.್ಲ ಉತ್ತರ ನೀಡಿದ್ದರೆ ಪೊಳ್ಳೆದು ಹೊಗುತ್ತೇನೆ. .ಚನ್ನಪಟ್ಟಣ ಕೆರೆ ಅಭಿವೃದ್ಧಿ ವಿಚಾರ ಸಮಯ ಬಂದಾಗ ಹೇಳುತ್ತೆನೆ ಚನ್ನಪಟ್ಟಣ ಕೆರೆ ಎಂಗೆ ಮಾಡಿಸುವುದು ನನಗೆ ಗೊತ್ತಿದೆ. ಹಾಸನ ಹೈಟೆಕ್ ಬಸ್ಸು ನಿಲ್ದಾಣ ಮಾಡಲು ರೇವಣ್ಣ ಬರಬೇಕಿತ್ತ, ಹಾಸನ ತಾಲ್ಲೂಕು ರಸ್ತೆ ಅಭಿವೃದ್ಧಿಗೆ 150 ಕೋಟಿ ಹಣ ನೀಡಿದ್ದೇನೆ ಎಂದು ಜೆಡಿಎಸ್ ಆಡಳಿತವಧಿಯ ಅಭಿವೃದ್ಧಿ ಕೆಲಸದ ಬಗ್ಗೆ ಎಳೆ ಎಳೆಚಿiÀiÁಗಿ ತಿಳಿಸಿದರು.
ಕಳೆದ ಒಂದು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ನೀಡಿದ್ದು, ರಣಘಟ್ಟ ಯೋಜನೆಯು ಹೆಚ್.ಡಿ. ಕುಮಾರಸ್ವಾಮಿಚಿiÀುವರು ಮುಖ್ಯಮಂತ್ರಿಯಾಗಿದ್ದಾಗ ನಾನು ಮತ್ತು ಬೇಲೂರು ಶಾಸಕರು ಒತ್ತಾಯಿಸಿ ಸುಮಾರು 16 ಕೆರೆ ಹಳೆಬಿಡು ಕೆರೆ ತುಂಬಿಸಲು 100 ಕೋಟಿ ಹಣ ಬಡ್ಜೆಟ್ ನಲ್ಲಿ ಕೊಟ್ಟಿದ್ದರು. ಅದನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿತ್ತು. ಈ ಹಿಂದೆ 5 ವರ್ಷಗಳ ಕಾಲ ಬಿಜೆಪಿ ಸರ್ಕಾರ ಮತ್ತು ಈಗ 14 ತಿಂಗಳ ಕಾಲ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಸಾಧನೆ ಎನು? ಅವರ ಕೊಡುಗೆ ಬಗ್ಗೆ ತಿಳಿಸಲಿ? ಎಂದು ಪ್ರಶ್ನಿಸಿದ ಅವರು, ನಾವು ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರು ಮಾಡಿದ ಕೆಲಸವನ್ನು ಈಗ ತಡೆ ಹಿಡಿದಿದ್ದಾರೆ. ಹಾಸನ ಬೇಲೂರು ರಸ್ತೆ ಯಡೆಗೌಡನಹಳ್ಳಿ ಬಿಳಿಕೆರೆ ರಸ್ತೆ ಅಭಿವೃದ್ಧಿ ಕಾಮಗಾರಿ ತಡೆಹಿಡಿದಿದ್ದಾರೆ . ತಡೆಹಿಡಿದ ಕಾಮಗಾರಿಗಳು ಸದನದಲ್ಲಿ ಅಂಗಿಕಾರವಾಗಿ ಬಡ್ಜೆಟ್ ನಲ್ಲಿ ಬಂದ ಕಾಮಗಾರಿಗಳು ಅವುಗಳನ್ನು ತಡೆ ಹಿಡಿಯಲು ಸಾಧ್ಯವಿಲ್ಲ. ಈ ಜಿಲ್ಲೆಗೆ ಬಿಜೆಪಿ ಸರ್ಕಾರದ ಸಾಧನೆ ಏನು? U್ಪಡ್ಕರಿ ಅವರು ಫೌಂಡೇಶನ್ ಹಾಕಿದ್ದ ನೂತನ ಹೆದ್ದಾರಿಯನ್ನು ನಿಲ್ಲಿಸಿದರು. ಮಂತ್ರಿಯಾದವರು ಸರಿಯಾಗಿ ಮಾಹಿತಿ ಪಡೆದು ಹೇಳಿಕೆ ನೀಡಬೇಕು.
ಆತರ ನಡೆದರೆ ಅದರ ವಿರುದ್ದ ನಾವು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯದ ಬಗ್ಗೆ ಸಮಯ ಬಂದಾಗ ಹೇಳುತ್ತೇನೆ. ಬಡ್ಜೆಟ್ ಪುಸ್ತಕ ಕಳುಹಿಸುತ್ತೇನೆ. ಬಿಜೆಪಿ ಮಂತ್ರಿಗಳು ಓದಿ ನೋಡಲಿ. ಈಲ್ಲೆಯ ನೀರಾವರಿ ಹೇಮಾವತಿ ಯೊಜನೆಚಿiÀು ಕೆಲಸವನ್ನು ಟೆಂಡರ್ ಆಗಿ ವರ್ಕ್ ಆರ್ಡರ್ ನೀಡಿದ್ದ ಕೆಲಸ ನಿಲ್ಲಿಸಿದ್ದಾರೆ. ಪ್ಲೈ ಓವರ್ ದುದ್ದ ಹಾಸನ ರಸ್ತೆ ಕೆಲಸ ಬಿಜೆಪಿ ಸರ್ಕಾರವಿದ್ದಾಗ ಮಾಡಿರುವುದಿಲ್ಲ. ನಾನು ಬಂದ ಮೇಲೆ ಮೆಡಿಕಲ್ ಕಾಲ್ಭೆಜ್ ಮಹಿಳಾ ಕಾಲೇಜು ಇಚಿಜಿನಿಯರಿಂಗ್ ಕಾಲ್ಭೆಜ್ ಲ್ಯಾಬ್ ಗಳನ್ನು ಹೆಚ್.ಡಿ. ಕುಮಾರಸ್ವಾಮಿ ಕಾಲದಲ್ಲಿ ಮಾಡಿದ್ದೇನೆ. ಬಿಜೆಪಿ ಸರ್ಕಾರ ಕಾಮಗಾರಿ ತಡೆಹಿಡಿಯುವ ಸರ್ಕಾರ. ಬಿಜೆಪಿ ನಾಯಕರು ಯಾವ ಮಾನ ಮರ್ಯಾದೆ ಇಟ್ಟುಕೊಂಡು ಜಿಲ್ಲೆಗೆ ಬಂದು ಮಾತನಾಡುತ್ತಾರೆ. ಅರಸೀಕೆರೆ ಇಚಿಜಿನಿಯರಿಂಗ್ ಕಾಲ್ಭೆಜ್ ಕುಮಾರಸ್ವಾಮಿ ಕಾಲದಲ್ಲಿ ಹಣ ನೀಡಿ ಮಂಜೂರು ಮಾಡಲಾಯಿತು. ಈಗ ಬರಿ ವಸೂಲಾತಿ ಕಾರ್ಯಕ್ರಮ ನಡೆಯುತ್ತಿದೆ ಅಷ್ಟೇ, ಬಿಜೆಪಿಯವರು ತಡೆ ಹಿಡಿಯುತ್ತಿದ್ದಾರೆ ನಾವು ಮಾಡಿಸುತ್ತಿದ್ದೇವೆ ಎಂದು ಆಕ್ರೋಶವ್ಯಕ್ತಪಡಿಸಿದರು.
Tags
ಹಾಸನ