ಹಲ್ಲು ಕಟ್ಟಿಸಿಕೊಡಿ ಎಂದು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದ ಜೆಡಿಎಸ್ ಕಾರ್ಯಕರ್ತ

ಶ್ರವಣಬೆಳಗೊಳ:ಹಾಸನ ಜಿಲ್ಲೆ ಶ್ರವಣಬೆಳಗೊಳ ಹೋಬಳಿಯ ಕೊತ್ತನಘಟ್ಟ ಗ್ರಾಮದ ಜೆಡಿಎಸ್ ಕಾರ್ಯಕರ್ತನೊಬ್ಬ ಹಲ್ಲು ಕಟ್ಟಿಸಿಕೊಡಿ ಎಂದು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ರವರಿಗೆ ಮನವಿ ಸಲ್ಲಿಸಿದ್ದಾನೆ.
ಕಾರ್ಯಕ್ರಮವೊಂದರ ಉದ್ಘಾಟನೆಗೆ ತೆರಳಿದ್ದ ಶಾಸಕರಿಗೆ ಕೊತ್ತನಘಟ್ಟ ಗ್ರಾಮದ ಅಣ್ಣಪ್ಪ ಎಂಬಾತ ಮನವಿ ಸಲ್ಲಿಸಿದ್ದು, ಮನವಿ ಪತ್ರದಲ್ಲಿ, “ಮಾನ್ಯರೇ, ನಾನು  ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ನಾನು ಪಕ್ಷಕ್ಕಾಗಿ ನನ್ನ  ಪ್ರಾಣವನ್ನು ಕೊಡಲು ತಯಾರಿದ್ದೇನೆ. ಕೆಲ ವರ್ಷಗಳ ಹಿಂದೆ ನಾನು ಬಸ್ಸಿನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ನೀವು ನಿಂತಿದ್ದನ್ನು ನೋಡಿ, ನಿಮ್ಮನ್ನು ಭೇಟಿಯಾಗುವ ಆತುರದಲ್ಲಿ ನಾನು ಚಲಿಸುತ್ತಿದ್ದ ಬಸ್ಸಿನಿಂದ ನೆಗೆದು ರಸ್ತೆಗೆ ಬಿದ್ದಾಗ (ನಾನು ಬಸ್ಸಿನಿಂದ ನೆಗೆದಿದ್ದು ನಿಮಗೆ ಗೊತ್ತಿರುವ ವಿಚಾರ) ನನ್ನ ಹಲ್ಲುಗಳನ್ನು ಕಳೆದುಕೊಂಡಿರುತ್ತೇನೆ. ಆದ್ದರಿಂದ ತಾವು ದಯಮಾಡಿ ನನಗೆ ಹಲ್ಲು ಕಟ್ಟಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇನೆ” ಎಂದು ಪತ್ರದಲ್ಲಿ ಬರೆದು ಶಾಸಕರಲ್ಲಿ ವಿನಂತಿಸಿಕೊAಡಿದ್ದಾನೆ. ಇದ್ದಕ್ಕೆ ಸ್ಪಂದಿಸಿದ ಶಾಸಕರು ಆದಷ್ಟು ಬೇಗ ಹಲ್ಲು ಕಟ್ಟಿಸಿಕೊಡುವ ಭರವಸೆ ನೀಡಿದ್ದು, ಕಾರ್ಯಕರ್ತ ಸಂತಸ ವ್ಯಕ್ತಪಡಿಸಿದ್ದಾನೆ.
ಈತ ಅಪ್ಪಟ ಜೆಡಿಎಸ್ ಅಭಿಮಾನಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರ ಹೆಸರನ್ನು ಎದೆಯ ಮೇಲೆ ಹಚ್ಚೆ ಬರೆಸಿಕೊಂಡಿದ್ದಾನೆ. ಜೆಡಿಎಸ್ ಪಕ್ಷದ ಯಾವುದೇ ಕಾರ್ಯಕ್ರಮವಿದ್ದರೂ ಪಕ್ಷದ ಚಿನ್ಹೆ ಇರುವ ಟೋಪಿ, ಶಾಲು ಹಾಗೂ ದ್ವಜ ಹಿಡಿದು ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಕುಸುಮಾ ಬಾಲಕೃಷ್ಣ ಪರವಾಗಿ ಜೈಕಾರ ಕೂಗಿ ಪ್ರಚಾರ 
ನಡೆಸುತ್ತಾನೆ.

Post a Comment

Previous Post Next Post