ರಾಮನಾಥಪುರ;- ಕೊಣನೂರು ಆರ್ಯವೈಶ್ಯಮಂಡಳಿಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀದೇವಿ, ಭೂದೇವಿ ಸಮೇತ ಶ್ರೀ ವೆಂಕಟರಮಣ ಸ್ವಾಮಿಯವರ ಪಂಚಲೋಹದ ಉತ್ಸವ ಮೂರ್ತಿಯ ಚರ ಪ್ರತಿಷ್ಠಾಪನಾ ಕಾರ್ಯಕ್ರಮವು ವಿಜೃಂಭಣೆಯಿAದ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಕಾವೇರಿ ನದಿಯಿಂದ ಗಂಗೆಯನ್ನು ತಂದು ಸೇವಾರ್ಥದಾರರ ಮನೆಯಿಂದ ಶ್ರೀದೇವಿ, ಭೂದೇವಿ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿಯವರ ವಿಗ್ರಹವನ್ನು ಸೇವಾರ್ಥದಾರರ ಕುಟುಂಬ ವರ್ಗದವರು ಭವ್ಯ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತಂದು ಸಂಕಲ್ಪ ಪೂಜೆಯನ್ನು ನೆರವೇರಿಸಿದರು. ಮದ್ಯಾಹ್ನ 2.30 ಕ್ಕೆ ದೇವತಾ ಪ್ರಾರ್ಥನೆ, ವಿಶ್ವಕ್ಸೇನ ಆರಾಧನೆ, ಸ್ವಸ್ಥಿ ಪುಣ್ಯಾಹವಾಚನೆ, ಮೈತ್ಸಂಗ್ರಹಣ, ಅಂಕುರಾರ್ಪಣೆ, ಅಗ್ನಿ ಪ್ರತಿಷ್ಠೆ, ವಾಸ್ತು ಹೋಮ, ಆಧಿವಾಸತ್ರಯ, ಚತುರ್ದಶ ಕಳಸ ಸ್ಥಾಪನೆ, ಪಂಚಶಯ್ಯದಿವಾಸ ಹೌತ್ರ ಪ್ರಂಶಸನ ಪೂರ್ವಕ ಮೂರ್ತಿ ಹೋಮಗಳು, ವಿಷ್ಣು ಪಾರಮಾತ್ಮಿಕ ಹೋಮ ಹಾಗೂ ಪೂರ್ಣಾಹುತಿಗಳು ನೆರವೇರಿದವು.
ಪುಣ್ಯಾಹ ವಾಚನೆ, ಕಳಶಾರಾಧನೆ ನಿತ್ಯ ಹೋಮಗಳು, ಪಂಚಾಮೃತ ಅಭಿಷೇಕ, ಪೂರ್ಣಾಹುತಿ, ಚರ ಪ್ರತಿಷ್ಠಾಪನೆ ನಂತರ ಕಲ್ಯಾಣೋತ್ಸವ ಹಾಗೂ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನೆರವೇರಿತು. ರಾತ್ರಿ 7 ಗಂಟೆಗೆ ವಿಷ್ಣುಸಹಸ್ರನಾಮ ಹಾಗೂ ಭಜನೆಯೊಂದಿಗೆ ಸ್ವಾಮಿಯವರ ಶಯನೋತ್ಸವ ಕಾರ್ಯಕ್ರಮ ನೆರವೇರಿತು. ಪೂಜಾ ಕಾರ್ಯಕ್ರಮಗಳನ್ನು ಬೆಂಗಳೂರಿನ ವಿ. ಶ್ರೀ ಅನಂತಶಯನ ರವರ ನೇತೃತ್ವದ ಸತ್ಯ, ಶ್ರೀಕಾಂತ್, ಸತ್ಯನಾರಾಯಣ್ ಹಾಗೂ ಸುರೇಶ್ ಭಟ್ ರವರುಗಳು ನೆರವೇರಿಸಿಕೊಟ್ಟರು.
ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಶ್ರೀದೇವಿ, ಭೂದೇವಿ ಸಮೇತ ಶ್ರೀ ವೆಂಕಟರಮಣ ಸ್ವಾಮಿಯವರ ಪಂಚಲೋಹದ ಉತ್ಸವ ಮೂರ್ತಿಯ ಸೇವಾರ್ಥದಾರರು ಅತ್ತಿಗುಪ್ಪೆ ಮನೆತನದ ಧನಲಕ್ಷö್ಮಮ್ಮ ಮತ್ತು ಎ.ಎನ್. ವರದರಾಜಶೆಟ್ಟಿ ಮತ್ತು ಕುಟುಂಬದವರು ಆಗಿದ್ದರು. ಇವರಿಗೆ ಹಾಗೂ ಕುಟುಂಬದರಿಗೆ ಆರ್ಯವೈಶ್ಯ ಮಂಡಳಿಯರು ಕೃತಜ್ಙತೆ ಸಲ್ಲಿಸಿದರು.
