ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಿನಿಮಾ ಪತ್ರಕರ್ತ, ಚಿತ್ರನಟ ಸುರೇಶ್ಚಂದ್ರ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ.
80ರ ದಶಕದಿಂದ ಸಿನಿಮಾ ಪತ್ರಕರ್ತರಾಗಿದ್ದ ಸುರೇಶ್ ಚಂದ್ರ, ಸಂಜೆವಾಣಿ ಪತ್ರಿಕೆ ಮೂಲಕ ಗುರುತಿಸಿಕೊಂಡಿದ್ದರು.ನಟ ನಿರ್ದೇಶಕ ಎಸ್.ನಾರಾಯಣ್ ಆಹ್ವಾನದ ಮೇರೆಗೆ 'ಚೆಲುವಿನ ಚಿತ್ತಾರ' ಸಿನಿಮಾದಲ್ಲಿ ಪೋಷಕ ನಟರಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಬಳಿಕ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
Tags
ಸಿನಿಮಾ