ನಗರವನ್ನು ಸ್ವಚ್ಛವಾಗಿಡುವುದು ನಮ್ಮಗಳ ಮೂಲಭೂತ ಕರ್ತವ್ಯ : ನಗರಸಭೆ ಇಂಜಿನೀಯರ್ ಕವಿತ

 ಹಾಸನ: ಕಸ ಎಲ್ಲೆಂದರಲ್ಲೇ ಬಿಸಾಕುವುದು ನಾಗರೀಕ ಲಕ್ಷಣಅಲ್ಲ, ನಗರ ಸಭೆ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದೆ ಆದರೂ ಅನಾಗರೀಕರಾಗಿ ನಾವು ಕಸವನ್ನು ಬೀದಿಗೆಸೆದು ನಗರವನ್ನು ಹಾಳುಮಾಡುತ್ತಿದ್ದೇವೆ ನಗರವನ್ನು ಸ್ವಚ್ಛವಾಗಿಡುವುದು ನಮ್ಮಗಳ ಮೂಲಭೂತ ಕರ್ತವ್ಯ ಎಂದು ಸಮಾಜಸೇವಕಿ ಹಾಗೂ ನಗರಸಭೆ ಇಂಜಿನೀಯರ್ ಕವಿತ ಅಭಿಪ್ರಾಯಪಟ್ಟರು ಅವರು ಇತ್ತೀಚೆಗೆ ಜಯನಗರ ಬಿಜಿವಿಎಸ್ ಘಟಕ ನಗರದ ರಿಂಗ್ ರಸ್ತೆಯ ವೃತ್ತದಲ್ಲಿ ಸಾರ್ವಜನಿಕವಾಗಿ ಹಮ್ಮಿಕೊಂಡಿದ್ದ ಬಿಜಿವಿಎಸ್ ಸದಸ್ಯತ್ವ ಆಂದೋಲನ ಉದ್ಘಾಟಿಸಿ ಮಾತನಾಡುತ್ತಿದ್ದರು.


ಭಾರತದ ಅಭಿವೃದ್ಧಿಗೆ ವಿಜ್ಞಾನ ಮಾರ್ಗವೆ ಅಂತಿಮ: ವಿಜ್ಞಾನ ಮಾರ್ಗಕ್ಕೆ ವೈಜ್ಞಾನಿಕ ಮನೋಭಾವ ಬಿತ್ತಲುಎಲ್ಲರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಇದುಜೀವನದ ಕಷ್ಟಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳುವ ಶಕ್ತಿಯನ್ನು ನೀಡುತ್ತz ಎಂದು ನುಡಿದು ಬಿಜಿವಿಎಸ್ ಜಯನಗರ ಬಡಾವಣೆಯಲ್ಲಿ ಕೋವಿಡ್ ಕಾಲದಿಂದ ಆರೋಗ್ಯದ ಕುರಿತು, ಅಂಗಳ ಪೌಷ್ಠಿಕ ತೋಟಗಳ ಕುರಿತು, ಪ್ಲಾಸ್ಟಿಕ್ ನಿಯಂತ್ರಣ ಕುರಿತು ನಿರಂತರವಾಗಿ ಜನರಲ್ಲಿ ಆರೋಗ್ಯಕರ ಚಟುವಟಿಕೆ ನಡೆಇಕೊಂಡು ಬರುತ್ತಿರುವುದು ಶ್ಲಾಘನೀಯ ಹೆಚ್ಚೆಚ್ಚು ಜನ ಬಿಜಿವಿಎಸ್ ಸದಸ್ಯರಾಗಿ ನಮ್ಮ ಬಡಾವಣೆಯನ್ನು ಕಸಮುಕ್ತ ಬಡಾವಣೆ ಮಾಡಿ ಹಸಿರು ಜಯನಗರ ಮಾಡೋಣ ಎಂದು ಕರೆನೀಡಿದರು.

ಸದಸ್ಯತ್ವ ಆಂದೋಲನದಲ್ಲಿ ಉಪಸ್ಥಿರಿದ್ದು ಸದಸ್ಯತ್ವ ಪಡೆದು ಮಾತನಾಡಿದ ಹಲೋ ಹಾಸನ್ ಪತ್ರಿಕೆಯ ಸಂಪಾದಕ ರವಿನಾಕಗೋಡು ಮಾತನಾಡಿ ಜನಗಳಲ್ಲಿ ವಿಜ್ಞಾನವನ್ನು ಪ್ರಚಾರ ಮಾಡಿತನ್ನ ದೈನಂದಿನ ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ ಪ್ರೇರೇಪಿಸಲು ಭಾರತಜ್ಞಾನ ವಿಜ್ಞಾನ ಸಮಿತಿಯು ಕಳೆದ ೩೩ ವರ್ಷಗಳಿಂದಲೂ ದೇಶಾದ್ಯಂತ ಶ್ರಮಿಸುತ್ತಿದೆ. ಹಾಸನದಲ್ಲೂ ಕೂಡಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪರಿಸರ, ವಿಜ್ಞಾನ ಹಬ್ಬ, ಜಲಾಂದೋಲನ ದಂತಹ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ ನಾನು ಈ ಚಟುವಟಿಕೆಗಳನ್ನು ಬಹಳಕಾಲದಿಂದ ಗಮನಿಸುತ್ತಿದ್ದೇನೆ ಎಂದು ನುಡಿದು ಎಲ್ಲರು ಜಯನಗರ ಬಡಾವಣೆ ಕಸ ಮುಕ್ತಮಾಡಲು ಬಿಜಿವಿಎಸ್ ಜೊತೆಗೂಡಲು ಕರೆನೀಡಿದರು. 

ಅಭಿಯಾನದಲ್ಲಿ ಪಾಲ್ಗೊಂಡ ಹೊಯ್ಸಳಪಥ ಪತ್ರಿಕೆಯ ಸಂಪಾದಕ ರಘುನಂದನ್ ಮಾತನಾಡಿ ವೈಜ್ಞಾನಿಕ ಮನೋಭಾವದಿಂದ ಪರಿಸರದ ವಿಷಯ, ಕಸದ ವಿಷಯವನ್ನ ಜನತೆ ಮತ್ತು ಮಕ್ಕಳು ಸರಿಯಾಗಿಅಧ್ಯಯನ ಮಾಡುವುದರಿಂದ ಭೂಮಿಯನ್ನು ನೂರಾರೂ ತಲೆಮಾರುಗಗಳಿಗೆ ಉಳಿಸಬಹುದುಎಂದು ನುಡಿದರು.

ಅಭಿಯಾನದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ ನಾಗರೀಕರ ಗಮನ ಸೆಳೆದ ಬಿಜಿವಿಎಸ್ ಜಿಲ್ಲಾ ಸಮಿತಿ ಸದಸ್ಯೆ ಆಶ ಕಳೆದ ಮೂರು ವರ್ಷಗಳಿಂದ ಜಯನಗರ ಘಟಕ ಬಿಜಿವಿಎಸ್೫೦ ಮನೆಗಳಲ್ಲಿ “ಕಸದಿಂದ-ರಸ” ಹೆಸರಿನಲ್ಲಿ ಅಂಗಳ ಕೃಷಿ ಹಾಗೂ ಘನತ್ಯಾಜ್ಯ ನಿರ್ವಹಣೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.ಅದನ್ನು ಈ ವರ್ಷ ೧೦೦ಕ್ಕೇರಿಸುವ ಗುರಿ ಹೊಂದಿದೆ, ಬಡಾವಣೆಯನ್ನು ಹಸಿರುಬಡಾವಣೆ ಮಾಡುವ ಹಿನ್ನಲೆಯಲ್ಲಿ ಹಾಸನ ನಗರದ ವಿವಿಧ ಸಂಘ-ಸAಸ್ಥೆಗಳ ಸಹಕಾರದಿಂದ ರಿಂಗ್‌ರಸ್ತೆಯ ವಿಭಜಕದ ನಡುವೆ ಹೂಗಿಡಗಳನ್ನು ನೆಟ್ಟು ಬೆಳಸಲಾಗಿದೆ. ಈಗ ಬಡಾವಣೆಯಲ್ಲಿ ಪೌಷ್ಠಿಕ ಅಂಗಳ ನಿರ್ಮಿಸುವ ಗುರಿ ಹೊಂದಿದೆ, ಬಡಾವಣೆಯ ಜನರ ನಡುವೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿವೃದ್ಧಿಗಾಗಿ ಮನೆಯಂಗಳದಲಿ ಮಾತುಕತೆ ಮಾಸಿಕ ಮನೆ ಮನೆ ಚಟುವಟಿಕೆ ನಡೆಸಿ ನಮ್ಮ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ರೂಪಿಸಲು ಬಿಜಿವಿಎಸ್ ಸದಸ್ಯತ್ವ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ವಿವರಸಿದರು.


ಈ ಸಂದರ್ಬದಲ್ಲಿ ಕ್ಲಿಯರಿನ್ ಸಂಸ್ಥೆಯ ಚಂದ್ರಶೇಖರ್, ಹಸಿರುಭೂಮಿ ಪ್ರತಿಷ್ಠಾನದ ಶಿವಶಂಕರಪ್ಪ, ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಡಾ.ಮಂಜುನಾಥ್, ಸಹಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಭಾನುಮತಿ, ಖಜಾಂಚಿ ಸುರೇಶ್, ಸಹಕಾರ್ಯದರ್ಶಿ ಶ್ರೀನಿವಾಸ್, ವಕೀಲ ಗುರುರಾಜ್, ಬಿಜಿವಿಎಸ್‌ಜಯನಗರಘಟಕಅಧ್ಯಕ್ಷೆ ಶಾರದಾ, ಉಪಾದ್ಯಕ್ಷೆ ಉಪಸ್ಥಿತರಿದ್ದು ಬಿಜಿವಿಎಸ್ ಸದಸ್ಯತ್ವ ನಡೆಸಿದರು. ಬಿಜಿವಿಎಸ್ ತಾ.ಕಾರ್ಯದರ್ಶಿ ವನಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು, ಘಟಕ ಕಾರ್ಯದರ್ಶಿ ಮೋನಿಕಾ ಸ್ವಾಗತಿಸಿ, ಉಪಾದ್ಯಕ್ಷೆಜಾನಕಿ ವಂದಿಸಿದರು.


Post a Comment

Previous Post Next Post