ಹಾಸನದ ಸಂಸ್ಕೃತಿಗ ತಕ್ಕಂತೆಯೇ ನೂತನ ಜಿಲ್ಲಾಧಿಕಾರಿ ಕಚೇರಿಯನ್ನು ನಿರ್ಮಿಸಲಾಗುವುದು. ಈ ಸಂಬಂಧ ಯೊಜನಾ ನಕ್ಷೆಯನ್ನು ತಯಾರಿಸಲಾಗುತ್ತಿದೆ ಎಮದು ಕಂದಾಯ ಸಚಿವರಾದ ಆರ್. ಅಶೋಕ್ ತಿಳಿಸಿದ್ದಾರೆ.
ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಸೂಕ್ತ ಯೊಜನೆ ರೂಪಿಸುವ ಸಂಬಂಧ ಇಂದು ಸಚಿವರು ಸ್ಥಳ ವೀಕ್ಷಣೆ ಹಾಗೂ ಯೊಜನಾ ನಕ್ಷೆಯನ್ನು ಪರಿಶೀಲನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಚೇರಿಯ ನಿರ್ಮಾಣವಾಗಿ ಸುಮಾರು 50 ವರ್ಷಗಳು ಕಳೆದಿವೆ, ಹಾಗಾಗಿ ವಿವಧ ಕಚೇರಿಗಳನ್ನೊಳಗೊಂಡ ನೂತನ ಜಿಲ್ಲಾಧಿಕಾರಿ ಕಚೇರಿ ಅವಶ್ಯಕತೆ ಇದೆ ಎಂದು ಶಾಸಕರಾದ ಪ್ರೀತಂ ಜೆ. ಗೌಡ ಹಾಗೂ ಜಿಲ್ಲಾಧಿಕಾರಿಗಲಾದ ಆರ್. ಗಿರೀಶ್ ಅವರ ಮನವಿಯಂತೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು ನೀಲಿ ನಕಾಶೆ ಹಾಗೂ ವಿಸ್ತ್ರುತ ಅಂದಾಜು ವೆಚ್ಚ ಪಟ್ಟಿ ಸಿಧ್ಧಪಡಿಸಲು ಸೂಚಿಸಲಾಗಿದೆ ಎಂದರು.
Tags
ಹಾಸನ