ಹಾಸನ : ಜೆ.ಡಿ.ಎಸ್ - ಕಾಂಗ್ರೆಸ್ ರಣರಂಗವಾದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ
ಹಾಸನ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜೆ.ಡಿ.ಎಸ್- ಕಾಂಗ್ರೆಸ್ ನಾಯಕರ ಮಾತಿನ ಚಕಮಕಿ.
ಜಿಪಂ ಅಧ್ಯಕ್ಷೆ ಕ್ಷಮೆ ಕೇಳಲು ಜೆಡಿಎಸ್ ಸದಸ್ಯರ ಪಟ್ಟು
ಅಧ್ಯಕ್ಷೆ ಶ್ವೇತಾ ದೇವರಾಜ್ ವಿನಾಕಾರಣ ನಮ್ಮ ನಾಯಕ ರೇವಣ್ಣ ಬಗ್ಗೆ ಆರೋಪ ಮಾಡಿದ್ದಾರೆ ಎಂದು ಆಕ್ರೋಶ
ನಾನು ದಲಿತೆ ಎಂದು ಹೇಳಿಕೊಂಡು ವಿನಾಕಾರಣ ಆರೋಪ ಮಾಡ್ತಾರೆ ಎಂದು ಕಿಡಿ
ಅಧ್ಯಕ್ಷೆ ಕ್ಷಮೆ ಕೇಳಿದ್ರೆ ಮಾತ್ರ ಮುಂದುವರೆಸಿ ಎಂದು ಆಗ್ರಹ
ಹಾಸನ ಜಿಪಂ ಸಾಮಾನ್ಯ ಸಭೆಯಲ್ಲಿ ಮುಂದುವರೆದ ಟಾಕ್ ವಾರ್
ಜಿಪಂ ಅಧ್ಯಕ್ಷೆಯನ್ನು ಏಕವಚನದಲ್ಲಿ ಸಂಭೋದಿಸಿದ ಹೆಚ್ ಡಿ ರೇವಣ್ಣ
ಏಯ್, ಸುಮ್ನೆ ಕುತ್ಕೊಳ್ಳೊಮ್ಮ ನಾನು ಸಿಇಒ ಜೊತೆ ಮಾತನಾಡ್ತಿದ್ದೀನಿ ಎಂದ ಹೆಚ್ಡಿಆರ್
ಏಯ್ ಕುತ್ಕೊಳ್ಳೊಮ್ಮ ಅನ್ಬೇಡಿ ಗೌರವ ಕೊಟ್ಟು ಮಾತನಾಡಿ ಎಂದ ಅಧ್ಯಕ್ಷೆ ಶ್ವೇತಾ ದೇವರಾಜ್
ಏನ್ ಗೌರವ ಕೊಡಬೇಕು ಅಂತ ಅಧ್ಯಕ್ಷೆ ಪ್ರಶ್ನಿಸಿದ ಭವಾನಿ ರೇವಣ್ಣ
ಗಂಡ ರೇವಣ್ಣ ಪರವಾಗಿ ವಕಾಲತ್ತು ವಹಿಸಿದ ಪತ್ನಿ ಭವಾನಿ ರೇವಣ್ಣ
ಅಧ್ಯಕ್ಷೆ ಪರ ದನಿ ಗೂಡಿಸಿದ ಕಾಂಗ್ರೆಸ್ ಎಂಎಲ್ಸಿ ಗೋಪಾಲಸ್ವಾಮಿ
ಗೊಂದಲದ ಗೂಡಾದ ಸಾಮಾನ್ಯ ಸಭೆ
ವೈಯಕ್ತಿಕ ಪ್ರತಿಷ್ಠೆ ಗಾಗಿ ಕಲಾಪ ಬಲಿ
Tags
ಹಾಸನ