ಬೇಲೂರಿನಲ್ಲಿ ದಲಿತಪರ-ಪ್ರಗತಿಪರರಿಂದ ಸಂವಿಧಾನ ದಿನಾಚರಣೆ

ಬೇಲೂರು: 

ಇಲ್ಲಿ ದಲಿತಪರ, ಪ್ರಗತಿಪರ ಚಿಂತಕರಿಂದ ಸಂವಿಧಾನ ದಿನವನ್ನು ಆಚರಿಸಲಾಯಿತು. ಪಟ್ಟಣದ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮಾತನಾಡಿದ ಜಿಲ್ಲಾ ಪರಿಷತ್ತು ಮಾಜಿ ಸದಸ್ಯ ಮರಿಯಪ್ಪ, ೧೯೪೯ ರ ನವೆಂಬರ್ ೨೬ ರಂದು ದೇಶಕ್ಕೆ ಸಂವಿಧಾನ ನೀಡಿದ ದಿನವಾಗಿದ್ದು ಈ ಸಂವಿಧಾನ ಧರ್ಮಗ್ರಂಥ, ಕಾನೂನು ಗ್ರಂಥವಾಗಿದೆ. ಇದರನ್ವಯ ನಾವು ನಡೆದುಕೊಂಡರೆ ದೇಶದಲ್ಲಿ ಶಾಂತಿ ನೆಲಸುತ್ತದೆ. ಎಲ್ಲಾ ಸಮೂಹದ ಜನರಿಗೂ ನ್ಯಾಯ ದೊರೆಯಲಿದೆ. ಈ ಸಂವಿಧಾನದೊಳಗಿನ ಕಾನೂನನ್ನು ಅರ್ಥ ಮಾಡಿಕೊಂಡು ಈ ದೇಶದನ ಜನ ಬದುಕು ಸಾಗಿಸಿದ್ದೇ ಆದಲ್ಲಿ ಎಲ್ಲೂ ಸಹ ಅಸಮಾನತೆ, ಅಹಿತಕರ ಘಟನೆ ನಡೆಯುವುದಿಲ್ಲ ಎಂದು ಹೇಳಿದರು.

ಬೇಲೂರಿನಲ್ಲಿ ಸಂವಿಧಾನ ದಿನವನ್ನು ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಲಕ್ಷö್ಮಣ್ ಮಾತನಾಡಿ, ಇಂದು ನಾವು ಉತ್ತಮ ಸ್ಥಾನಮಾನ ಪಡೆದಿದ್ದರೆ ಅದಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕಾರಣವಾಗಿದೆ. ಪ್ರಪಂಚವೆ ಮೆಚ್ಚುವಂತ ಸಂವಿಧಾನವನ್ನು ಕೊಟ್ಟಂತ ದಿನವಾಗಿದೆ. ಸಮಾನ ನಾಗರೀಕ ಹಕ್ಕು ನೀಡಿದ ದಿನವಾಗಿದೆ ಎಂದರು. ಈ ಸಂದರ್ಭ ದಲಿತ ಮುಖಂಡರಾದ ಎನ್.ಯೋಗೇಶ್, ಪತ್ರಕರ್ತ ಸಂಘದ ಅಧ್ಯಕ್ಷ ಡಿ.ಬಿ.ಮೋಹನಕುಮಾರ್, ಪ್ರಮುಖರಾದ ಈಶ್ವರ್‌ಪ್ರಸಾದ್, ಹೊಸಳ್ಳಿರಾಜು, ಮಂಜುನಾಥ್, ತೀರ್ಥಕುಮಾರ್, ಬಾಬು, ಜಗದೀಶ್, ಜೀವನ್, ಕೃಷ್ಣಯ್ಯ, ಲಕ್ಷö್ಮಣ್, ಪುಟ್ಟರಾಜು ಇತರರು ಇದ್ದರು.


Post a Comment

Previous Post Next Post