ಹಾಸನ ಜಿಲ್ಲೆ ‌ಪತ್ರಕರ್ತರಿಗೆ ಎರಡನೇ ಹಂತದಲ್ಲಿ ಕೋವಿಡ್ 19 ತಪಾಸಣೆ

ಹಾಸನ ಜು 5 :  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಜಿಲ್ಲೆಯ ‌ಪತ್ರಕರ್ತರು ಹಾಗೂ ವಾರ್ತಾ ‌ಮತ್ತು ಸಾರ್ವಜನಿಕ ಸಂಪರ್ಕ ‌ಇಲಾಖೆ‌ ಅಧಿಕಾರಿ‌ ಸಿಬ್ಬಂದಿಗಳಿಗೆ ಎರಡನೇ ಹಂತದಲ್ಲಿ ಕೊವಿದ್ 19 ತಪಾಸಣೆ ನಡೆಸಲಾಯಿತು.
ಜಿಲ್ಲಾ ಆರೋಗ್ಯ ‌ಮತ್ತು‌ ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ,ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ‌ಅಧಿಕಾರಿ‌ ವಿನೋದ್ ಚಂದ್ರ, ಕಾರ್ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪ್ರಸನ್ನ ಕುಮಾರ್, ರಾಜ್ಯ ಕಾರ್ಯಕಾರಿ ಸಮತಿ ಸದಸ್ಯರಾದ ರವಿ ನಾಕಲಗೂಡು ಹಾಗೂ ಜಿಲ್ಅ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ.ಜೆ ಸುರೇಶ್ ಹಾಗೂ ಪದಾಧಿಕಾರಿಗಳು ಈ‌ ಸಂದರ್ಭದಲ್ಲಿ ಹಾಜರಿದ್ದರು ‌ಜಿಲ್ಲೆಯ ಐವತ್ತಕ್ಕೂ ಹೆಚ್ಚು ಮಾಧ್ಯಮ ಪ್ರತಿನಿಧಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ‌ಅಧಿಕಾರಿ‌ ಸಿಬ್ಬಂದಿಗಳು ಕೊವಿದ್ 19 ತಪಾಸಣೆಗೆ ಒಳಪಟ್ಟರು .
ಈ‌ ಹಿಂದೆಯೂ ಕೊವಿದ್ ಆಸ್ಪತ್ರೆ ಹಾಗೂ ತಾಲ್ಲೂಕು ‌ಆಸ್ಪತ್ರೆಗಳಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ  ಕೋವಿದ್ 19 ತಪಾಸಣೆ ಏರ್ಪಡಿಸಲಾಗಿತ್ತು

Post a Comment

Previous Post Next Post