ಹಾಸನ: ಸಚಿವ ಗೋಪಾಲಯ್ಯ- ಹಾಸನ ಶಾಸಕ ಪ್ರೀತಂಗೌಡ ಮನಸ್ತಾಪ ವಿಚಾರ
ಚನ್ನರಾಯಪಟ್ಟಣದಲ್ಲಿ ಸಚಿವ ಗೋಪಾಲಯ್ಯ ಸ್ಪಷ್ಟನೆ
ನಾವು ಚೆನ್ನಾಗಿದ್ದೇವೆ, ಮನಸ್ತಾಪ ಯಾವುದೂ ಇಲ್ಲ
ಜನರ ಅಹವಾಲಿಗೆ ಉತ್ತಮವಾಗಿ ಸ್ಪಂದಿಸುತ್ತೇನೆ
ಬೇರೆ ಪಕ್ಷದ ಜನರಿಗೂ ಸರ್ಕಾರದ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ
ನಾನು ಸರ್ಕಾರದ ಪರವಾಗಿ ಜಿಲ್ಲೆಗೆ ಬಂದಿದ್ದೇನೆ
ಬೆಂಗಳೂರಿನ ನನ್ನ ಕಚೇರಿಗೆ ಬಂದರೂ ಸ್ಪಂದಿಸುತ್ತೇನೆ
ಯಾವುದೇ ಭಿನ್ನಾಭಿಪ್ರಾಯದ ಪ್ರಶ್ನೆ ಇಲ್ಲ
ಮಾಜಿ ಸಚಿವ ರೇವಣ್ಣ ಅವರ ಮನೆಗೆ ಊಟಕ್ಕೆ ಹೋದ ವೇಳೆ ವಿಚಾರ
ಕರೆದಾಗ ಸೌಜನ್ಯಕ್ಕೆ ಹೋಗುವುದು ರಕ್ತಗತವಾಗಿ ಬಂದಿದೆ
ಇದನ್ನು ಯಾರೂ ಕೂಡಾ ಪ್ರಶ್ನೆ ಮಾಡಿಲ್ಲ, ಈ ಪ್ರಶ್ನೆಯನ್ನು ಯಾಕೆ ಸುಮ್ಮನೆ ಉದ್ಭವ ಮಾಡುತ್ತೀರಾ
ಹೇಮೆಗೆ ಬಾಗಿನ ಅರ್ಪಣೆ ವೇಳೆ ಪ್ರೀತಂ ಕರೆದಿಲ್ಲ ಎಂಬ ವಿಚಾರ
ಪ್ರೀತಂಗೌಡರು ಅವರ ತಾಲೂಕನ್ನು ಬಿಟ್ಟು ಬರೋದಿಲ್ಲ
ನನ್ನ ಕ್ಷೇತ್ರ ಬಿಟ್ಟು ಬೇರೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗೋದಿಲ್ಲ ಎಂದು ನನ್ನ ಬಳಿ ಹೇಳಿದ್ದಾರೆ