ಬಿಜೆಪಿ ನಾಯಕರ ವಿರುದ್ಧ ದಲಿತ ಸಂಘಟನೆಯ ಮುಖಂಡರ ಆಕ್ರೋಶ

ಅರಸೀಕೆರೆ:-ನಗರಾಭಿವೃದ್ಧಿ  ಪ್ರಾ„ಕಾರದ ಪದಾ„ಕಾರಿಗಳ ಪದಗ್ರಹಣಕ್ಕೂ ಮುನ್ನ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರ್ಯಾಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದಲಿತ ವಿರೋಧ ಕಾಂಕ್ರಿಟ್ ಶಾಸಕ ಎಂದು ಶಿವಲಿಂಗೇಗೌಡರ ವಿರುದ್ಧ ಘೋಷಣೆ ಕೂಗಿದ್ದನ್ನು ದಲಿತ ಸಮಾಜ ಹಾಗೂ ಸಂಘಟನೆಗಳ ಮುಖಂಡರು ಖಂಡಿಸಿದರು. 
       
ಆದಿ ಜಾಂಬವ ಮಾದಿಗ ಮಹಾಸಭಾದ ಗೌರವಾಧ್ಯಕ್ಷ ಶೇಖರಪ್ಪ ಮಾದಿಗ ದಂಡೋರ ಹೋರಾಟ ಸಮಿತಿಯ ತಾಲೂಕಾಧ್ಯಕ್ಷ ಎಪಿ ಚಂದ್ರಯ್ಯ ಮತ್ತು ಜಿಲ್ಲಾ ಕಾರ್ಯದರ್ಶಿ ಚಿಕ್ಕಬಾಣವಾರ ವೆಂಕಟೇಶ್ ಮೈಸೂರು ಸೀಮೆ ಲಂಬಾಣಿ ಸಮಾಜದ ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ್ ನೇತೃತ್ವದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘಟನೆಯ ಮುಖಂಡರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು  ದಲಿತ ವಿರೋ„ ಕಾಂಕ್ರಿಟ್ ಶಾಸಕ ಎಂದು ಘೋಷಣೆ ಕೂಗಿದ ಬಿಜೆಪಿ ನಾಯಕರು ಬಹಿರಂಗ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಉಗ್ರಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
       
ಶೇಖರಪ್ಪ ಮಾತನಾಡಿ ಆಳುವವರ ಅವಕೃಪೆಯಿಂದ  ಶತ-ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನತೆ ಸೇರಿದಂತೆ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗೆ ಕ್ಷೇತ್ರದಲ್ಲಿ ಶಾಸಕ ಶಿವಲಿಂಗೇಗೌಡರ ಕೊಡುಗೆ ಅಪಾರವಾಗಿದೆ ಅಲ್ಲದೆ ರಾಜಕೀಯವಾಗಿಯೂ ಸಹ ಸಣ್ಣಪುಟ್ಟ ಸಮುದಾಯಗಳ ಮುಖಂಡರನ್ನು ಗುರುತಿಸಿ ಜಿ.ಪಂ, ತಾ.ಪಂ ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಅ„ಕಾರ ಹಂಚಿಕೆಯ ಸಂದರ್ಭದಲ್ಲಿ ಶಾಸಕರು ಸಾಮಾಜಿಕ ನ್ಯಾಯ ಒದಗಿಸುತ್ತಾ ಬಂದಿರುವುದರಿಂದಲೇ ಇಂದು ದಲಿತ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳು ಶಾಸಕರ ಬೆಂಬಲಕ್ಕೆ ನಿಂತಿವೆ ಎಂದರು .

ದಲಿತ ಕಾಲೋನಿ ತಾಂಡ್ಯ ಹಟ್ಟಿಗಳ ಕಡೆ ತಿರುಗಿಯೂ ನೋಡದ ರಾಜಕಾರಣಿಗಳ ಮಧ್ಯೆ ಶಾಸಕ ಶಿವಲಿಂಗೇಗೌಡರು ನಮ್ಮ ಮನೆಯ ಅಂಗಳಕ್ಕೆ ಬಂದು ನಮ್ಮ ಕುಂದುಕೊರತೆಗಳನ್ನು ಆಲಿಸಿ ನಮ್ಮಗೆ ಶುದ್ಧ ಕುಡಿಯುವ ನೀರು ರಸ್ತೆ ನಿರ್ಮಾಣ ಸೇರಿದಂತೆ ದೇವಾಲಯ ಮತ್ತು ಸಮುದಾಯ ಭವನಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ ಇದೆಲ್ಲ ಅರಿಯದೆ ದಲಿತ ವಿರೋ„ ಕಾಂಕ್ರಿಟ್ ಶಾಸಕ ಎಂದು ಹೇಳುತ್ತಾ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸ್ಪಂದಿಸುವ ಶಾಸಕರ ವಿರುದ್ಧ ಮಾತನಾಡುವುದು ನಮ್ಮ ಸರಿಯಲ್ಲ ಎಂದು ಆಕ್ಷೇಪಿಸಿದರು. 
 
ನಗರಸಭೆ ಅಧ್ಯಕ್ಷ ಸ್ಥಾನವೂ ಎಸ್ ಟಿ ಮೀಸಲು ಎಂದು ಪ್ರಕಟಣೆ ಕುರಿತು ವಿರೋ„ಸಲಿಲ್ಲ ಆದರೆ ಅರಸೀಕೆರೆ ನಗರಸಭೆ ಸೇರಿದಂತೆ ರಾಜ್ಯದ ಇತರೆ ನಗರಸಭೆಗಳಿಗೆ ಪ್ರಕಟಗೊಂಡಿರುವ ಮೀಸಲಾತಿ ನಿಯಮಾನುಸಾರವಾಗಿ ಆಗಿಲ್ಲ ಎಂದು ಈ ಹಿಂದೆ ಅವರೇ ಸುದ್ದಿಗೋಷ್ಠಿ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನ್ಯಾಯಾಲಯ ಕೂಡ ಪ್ರಕಟಿಸಿರುವ ಮೀಸಲಾತಿಯಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಹಾಗಾಗಿ ರಾಜ್ಯದ ಎಲ್ಲಾ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ತಡೆ ಹಿಡಿಯಲಾಗಿದ್ದು ಇದು ಬಿಜೆಪಿ ಸರ್ಕಾರದ ಸ್ವಾರ್ಥ ರಾಜಕಾರಣವನ್ನು  ತೋರುತ್ತಿದೆ ಇದನ್ನು ನಮ್ಮ ಸ್ಥಳೀಯ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಲಿ ಅನಾವಶ್ಯಕವಾಗಿ ಶಾಸಕರ ವಿರುದ್ಧ ಹೇಳಿಕೆ ನೀಡುವುದು ಹಾಗೂ ಸ್ವಾರ್ಥ ರಾಜಕಾರಣಕ್ಕಾಗಿ ಸಮಾಜ-ಸಮಾಜಗಳ ನಡುವೆ ಕಲಹಕ್ಕೆ ಕಾರಣವಾಗುವುದು ಸರಿಯಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ ಭೋವಿ ಸಮಾಜದ ಮುಖಂಡ ನಾಗರಾಜ್ ಮೈಸೂರು ಸೀಮೆ ಲಂಬಾಣಿ ಸಮಾಜದ ತಾಲ್ಲೂಕು ಅಧ್ಯಕ್ಷ ಗಂಗಾಧರ ನಾಯ್ಕ ತಾಪಂ ಸದಸ್ಯಶೇಖರ್ ನಾಯಕ್ ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ನಿರ್ದೇಶಕ  ಜಯಾಕುಮಾರ್ ಮತ್ತಿತರರು ಉಪಸ್ಥಿತರಿದ್ದರು .       



Post a Comment

Previous Post Next Post