ಚನ್ನರಾಯಪಟ್ಟಣದ ನಿವಾಸಿ ಸಿಡಿಲು ಬಡಿದು ಸ್ಥಳದಲ್ಲೇ ಮೃತ

ಚನ್ನರಾಯಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಉದಯ್ 18 ಮೃತ ದುರ್ದೈವಿ ಯಾಗಿದ್ದು ಇಂದು ಸಂಜೆ 6.30 ರ ಸಮಯದಲ್ಲಿ ಮನೆಯ ಸಮೀಪವಿದ್ದ ಫೀಲ್ಡಿನಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಗುಡುಗು-ಸಿಡಿಲು ಬಡಿತದಿಂದ ಮಳೆ ಬರುವ ಮುನ್ಸೂಚನೆ ಇತ್ತು... ಕೊನೆಯ ಪಂದ್ಯದ ಕೊನೆಯ  ಓವರ್ ನ ಕೊನೆಯ ಬಾಲ್ ಎಸೆಯುವ ಸಂದರ್ಭದಲ್ಲಿ ಸಿಡಿಲು ನೇರವಾಗಿ ಉದಯ್ ಅವನಿಗೆ ಬಡಿದ ಸಂದರ್ಭದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳದಲ್ಲಿದ್ದ ಯುವಕರು ಗಾಬರಿಗೊಂಡು ಹತ್ತಿರ ಹೋಗಿ ನೋಡಿದಾಗ ಸವನಪಿದ್ದ. ಪಟ್ಟಣದ ನವೋದಯ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

Post a Comment

Previous Post Next Post