ಅರಸೀಕೆರೆ ಬಸ್ ನಿಲ್ದಾಣದಲ್ಲಿ ಬಸ್‌ಗಳಿದ್ದರೂ ನಿಲ್ದಾಣ ಖಾಲಿ-ಖಾಲಿ .

ಅರಸೀಕೆರೆ :- ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 15ನೇ ದಿನ ತಲುಪಿದ್ದು ಸರ್ಕಾರತಮ್ಮ ಬೇಡಿಕೆಗಳ ಬಗ್ಗೆ ಯಾವುದೇಕ್ರಮ ಕೈಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಚಾಲಕರು ಹಾಗೂ ನಿರ್ವಾಹಕರು ಮುಷ್ಕರ ಬಿಟ್ಟುಕರ್ತವ್ಯ ಪಾಲನೆಗೆ ಮುಂದಾಗಿದ್ದು ನಿಲ್ದಾಣದಲ್ಲಿ ಕೆಂಪು ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದ ನಿಲ್ದಾಣದಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದವಾದರೂ ಪ್ರಯಾಣಿಕರಿಲ್ಲದೆ ಖಾಲಿ ಬಸ್ಸುಗಳು ಚಲಿಸುವ ಸ್ಥಿತಿ ನಿರ್ಮಾಣವಾಯಿತು.



 ಸದಾ ಜನಜಂಗುಳಿಯಿAದ ಕೂಡಿರುತ್ತಿದ್ದರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಚಾಲಕರು ,ನಿರ್ವಾಹಕರ ಮುಷ್ಕರದ ದಿನದಿಂದ ಬಹುತೇಕರು ನಿಲ್ದಾಣದಕಡೆ ಸುಳಿಯುತ್ತಿಲ್ಲ ಖಾಸಗಿ ವಾಹನಗಳ ದುಪ್ಪಟ್ಟು ಬೆಲೆಗೆ ಬೆದರಿರುವ ಪ್ರಯಾಣಿಕರು ನಿಲ್ದಾಣದತ್ತ ಬರುತ್ತಿಲ್ಲವೋಅಥವಕರೋನಾ ಮಹಾಮಾರಿಯಎರಡನೇಯ ಅಲೆಗೆ ನಲುಗಿರುವ ಪ್ರಯಾಣಿಕ ಮನೆ ಬಿಟ್ಟು ಹೊರ ಬರುತ್ತಿಲ್ಲವೋಒಟ್ಟಾರೆ ಬಸ್‌ಗಳಿದ್ದರೂ ನಿಲ್ದಾಣ ಖಾಲಿ-ಖಾಲಿ .

 ಕರ್ತವ್ಯಕ್ಕೆ ಹಾಜರಾಗಿದ್ದ ನಿರ್ವಾಹಕರು ಪ್ರತಿಕ್ರಿಯಿಸಿ ಬಿ.ಎಸ್‌ಯಡೀಯೂರಪ್ಪ ನಮ್ಮ ಬೇಡಿಕೆಈಡೇರಿಸುತ್ತಾರೆಂಬ ಅಪಾರ ನಂಬಿಕೆ ಇತ್ತು ನಾವುಗಳು ಮೊದಲಿನಿಂದ ಬಿಜೆಪಿಯನ್ನು ಬೆಂಬಲಿಸುತ್ತಲೇ ಬಂದಿದ್ದೇವೆಆದರೆ ಈಗ ಸರ್ಕಾರ ನಮ್ಮ ಬಗ್ಗೆ ನಿರ್ಲಕ್ಷ ಮನೋಭಾವತೋರಿರುವುದು ಬೇಸರವನ್ನುಉಂಟುಮಾಡಿದೆ ಆನೇಕ ಸರ್ಕಾರಿ ನೌಕರರುಯಾವುದೇ ಶ್ರಮವಿಲ್ಲದೆ ಹೆಚ್ಚು ಸಂಭಳ ಪಡೆಯುತ್ತಿದ್ದು ನಮಗೇಕೆ ಈ ತಾರತಮ್ಯಎಂದು ಅಳಲನ್ನುತೋಡಿಕೊಂಡರು .

 ಚಾಲಕರು ಪ್ರತಿಕ್ರಿಯಿಸಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗದೆ ಸಂಬಳ ಪಡೆಯಬಹುದುಆದರೆ ನಾವು ಹಾಗೆ ಮಾಡಲು ಸಾಧ್ಯವಿದೆಯೇ ನಾವು ಎಷ್ಟೆ ಸರಿಯಾಗಿ ಚಾಲನೆ ಮಾಡಿದರೂಎದುರಿನಿಂದ ಬರುವಚಾಲಕರು ಮಾಡುವತಪ್ಪಿಗೆ ಪ್ರಾಣವನ್ನೆ ಕಳೆದುಕೊಳ್ಳಬೇಕಾಗುತ್ತದೆ ಪ್ರಾಣದಅಂಗನ್ನುತೊರೆದುಕರ್ತವ್ಯ ನಿರ್ವಹಿಸುವ ನಮಗೆ ಸಂಬಳ ಕಡಿಮೆಅಲ್ಲದೆ ನಿವೃತ್ತಿಯಾದ ನಂತರ ಪಿಂಚಣಿಯುಇಲ್ಲಒAದುಕಣ್ಣಿಗೆ ಬೆಣ್ಣೆಇನ್ನೊಂದುಕಣ್ಣಿಗೆ ಸುಣ್ಣಇದುಯಾವ ನೀತಿಈಗಲಾದರೂ ಆಳುವ ಮಂತ್ರಿ ಮಹೋದಯರು ನಮ್ಮ ಬಗ್ಗೆ ಗಮನ ಹರಿಸಿ ಹೆಚ್ಚಿನ ಸೌಲಭ್ಯ ನೀಡಬೇಕುಎಂದು ಮನವಿ ಮಾಡಿದರು.

Post a Comment

Previous Post Next Post