ಹಾಸನ ಜೂ.೧೦:- ಇತ್ತೀಚೆಗೆ ಹೊಳೆನರಸೀಪುರ ತಾಲ್ಲೂಕು ಚಾಕೇನಹಳ್ಳಿ ಗ್ರಾಮದಲ್ಲಿ ಜಿಲೆಟಿನ್ ಸ್ಪೋಟದಿಂದ ಮೃತಪಟ್ಟ ಮೂವರು ಕಲ್ಲುಗಣಿ ಕಾರ್ಮಿಕರ ಕುಟುಂಬಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಸರ್ಕಾರದ ವತಿಯಿಂದ ತಲಾ ೫ ಲಕ್ಷ ರೂಪಾಯಿಗಳ ಪರಿಹಾರ ಚೆಕ್ ವಿತರಿಸಿದರು.
ಶಾಸಕರಾದ ಸಿ.ಎನ್ ಬಾಲಕೃಷ್ಣ ಜಿಲ್ಲಾಧಿಕಾರಿ ಅರ್ ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಹಾಜರಿದ್ದರು.
ಕಲ್ಲು ಗಣಿ ಮಾಲಿಕರಿಂದಲೂ ತಲಾ ೭.೫ ಲಕ್ಷ ರೂ ಗಳನ್ನು ಕೊಡಿಸಲಾಗಿದೆ ಎಂದು ಸಚಿವರು ,ಶಾಸಕರು ಮಾಹಿತಿ ನೀಡಿದರು.
Tags
ಹಾಸನ