ವಿದ್ಯುತ್ ಕಂಬ ಬದಲಿಸಲು ಸಾರ್ವಜನಿಕರ ಆಗ್ರಹ

ಬೇಲೂರು: ಇಲ್ಲಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಇರುವ ಮಯೂರ  ವೇಲಾಪುರಿ ಹೊಟೇಲ್ ಬಳಿ ವಿದ್ಯುತ್ ಕಂಬವೊಂದು ಬಾಗಿದ್ದು ಯಾವುದೆ ಸಂದರ್ಭದಲ್ಲಿ ನೆಲಕಚ್ಚುವ ಸಾಧ್ಯತೆಯಿದೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನ ಹಾಗೂ ಜನರು ಸಂಚರಿಸಲಿದ್ದಾರೆ. ಈ ಸ್ಥಳದಲ್ಲಿ ಬ್ಯಾಂಕುಗಳು, ಆಸ್ಪತ್ರೆಗಳು, ಹೊಟೇಲುಗಳು ಇದ್ದು ಜನದಟ್ಟಣೆಯಿಂದ ಕೂಡಿರುತ್ತದೆ. 

ಇಂತಹ ಸಂದರ್ಭ ವಿದ್ಯುತ್ ಕಂಬವೇನಾದರೂ ಬಿದ್ದರೆ ಹೆಚ್ಚಿನ ಅನಾಹುತವಾಗಲಿದೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳು ಗಮನಹರಿಸಿ ಕೂಡಲೆ ವಿದ್ಯುತ್ ಕಂಬ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement


Post a Comment

Previous Post Next Post