ಬೇಲೂರು ಕೋಟೆ ಕುಡಿಯುವ ನೀರಿನ ಹಳೆ ಟ್ಯಾಂಕ್ ನೆಲಸಮ

 ಬೇಲೂರು:ಇಲ್ಲಿನ ಶ್ರೀಚನ್ನಕೇಶವಸ್ವಾಮಿ ದೇವಾಲಯದ ಹಿಂಭಾಗ ಇರುವ ಶಿಥಿಲಗೊಂಡಿದ್ದ  ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ಅನ್ನು ಪುರಸಭೆಯಿಂದ ಕೆಡವಿಸಲಾಯಿತು.


೫೦ ವರ್ಷಗಳ ಹಿಂದೆ ನಿರ್ಮಿಸಿದ್ದ ಈ ಟ್ಯಾಂಕ್ ಕುಡಿಯುವ ನೀರಿನ ಸರಬರಾಜಿಗೆ ಜನಸಂಖ್ಯೆಗೆ ಅನುಗುಣವಾಗಿ ನಿರ್ಮಾಣ ಮಾಡಲಾಗಿದ್ದ ಈ ಟ್ಯಾಂಕ್ ವರ್ಷ ಕಳೆದಂತೆ ಗುಣಮಟ್ಟ ಕಳೆದುಕೊಂಡು ಸೋರಲಾರಂಬಿಸಿತು. ಕಳೆದ ೧೦ ವರ್ಷದಿಂದ ಹೆಚ್ಚು ಹಾನಿಗೊಳಗಾಗಿತ್ತು. ಟ್ಯಾಂಕ್ ಶಿಥಿಲಗೊಂಡಿದ್ದು ಯಾವುದೆ ಸಂದರ್ಭ ಬೀಳುವ ಆತಂಕವನ್ನು ಟ್ಯಾಂಕ್ ಅಕ್ಕಪಕ್ಕದ ನಿವಾಸಿಗಳು ವ್ಯಕ್ತಪಡಿಸಿದ್ದಲ್ಲದೆ ಪುರಸಭೆಗೆ ದೂರನ್ನು ನೀಡಿದ್ದರು.


ಈ ಬಗ್ಗೆ ಕಾಯೋನ್ಮುಖರಾದ ಪುರಸಭೆಯ ಮುಖ್ಯಾಧಿಕಾರಿ ಸುಜಯ್ ಅವರು ಮೇಲಾಧಿಕಾರಿಗಳಿಗೆ ಪತ್ರ ಬರೆದು ಟ್ಯಾಂಕ್ ಶಿಥಿಲಗೊಂಡಿರುವ ಹಾಗೂ ಟ್ಯಾಂಕ್ ಬಿದ್ದರೆ ಆಗುವ ಪರಿಣಾಮ ಕುರಿತು ಮಾಹಿತಿ ಒದಗಿಸಿದ್ದರು. 

Advertisement


ಮೇಲಾಧಿಕಾರಿಗಳಿಂದ ಅನುಮತಿ ದೊರತದ್ದರಿಂದ ಇಂದು ಟ್ಯಾಂಕ್ ಅನ್ನು ಕೆಡವಲಾಯಿತು. ಟ್ಯಾಂಕ್ ಕೆಡವುದರಲ್ಲಿ ಪರಿಣಿತಿ ಹೊಂದಿರುವ ಭರತ್ ಟ್ರೇರ‍್ಸ್ ಕಾರ್ಮಿಕರು ಟ್ಯಾಂಕ್ ಅನ್ನು ಕೆಡವಿದರು. ಇನ್ನು ೩ ಅಥವಾ ೪ ದಿನದಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. 

Post a Comment

Previous Post Next Post