ಹಾಸನ: ರಾಜ್ಯ ಒಕ್ಕಲಿಗ ನಿಗಮದ ನಿರ್ದೇಶಕರು ಹಾಗೂ ರಾಜ್ಯ ಬಿ ಜೆ ಪಿ ಮಹಿಳಾ ಕೋಶಾಧ್ಯಕ್ಷರಾದ ಸುರಭಿರಘು ಚೀಕನಹಳ್ಳಿ ರವರು ಅವರು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಪುರದಲ್ಲಿರುವ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಕ್ಷೇತ್ರಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ ವಿ ಟಿ ಬಸವರಾಜ್ ರವರು ಸುರಭಿರಘು ರವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎ ಪಿ ಎಂ ಸಿ ನಿರ್ದೇಶಕರಾದ ದೇಶಾಣಿ ದೇವರಾಜು, ಭಾರತೀಯ ಜನತಾ ಪಕ್ಷದ ಯುವ ಮುಖಂಡರಾದ ಜ್ಞಾನಮೂರ್ತಿ, ಸಚ್ಚಿನ್ ನಾಗೇನಹಳ್ಳಿ ಕರಗುಂದ ಗ್ರಾ ಪಂ ಉಪಾಧ್ಯಕ್ಷರಾದ ದಯಾನಂದ ಗೊಲ್ಲರಹಳ್ಳಿ,
ಹಂದ್ರಾಳು ಗ್ರಾ ಪಂ ಸದಸ್ಯರಾದ ಸಂಪತ್ ಕುಮಾರ್, ದಿನೇಶ್,ಕೃಷ್ಣೋಜಿರಾವ್, ಭಾಸ್ಕರ್, ಮಂಜುನಾಥ ಹಾಗೂ ಬಿ ಜೆ ಪಿ ಹಿರಿಯ ಕಿರಿಯ ಮುಖಂಡರು ಇದ್ದರು.