ಬೆಳೆಗಾರರಿಗೆ ಮಾರಕವಾಗಿರುವ 92/ಎ ಖಾಯಿದೆ ರದ್ದು ಗೊಳಿಸ ಬೇಕು

ಸಕಲೇಶಪುರ:ಬೆಳೆಗಾರರಿಗೆ ಮಾರಕವಾಗಿರುವ 92/ಎ ಖಾಯಿದೆ ರದ್ದು ಗೊಳಿಸ ಬೇಕು ಎಂದು  ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್) ಅದ್ಯಕ್ಷ ಡಾ.ಎಚ್.ಟಿ.ಮೋಹನ್ ಕುಮಾರ್ ಒತ್ತಾಯಿಸಿದರು.

   ಕಸಬಾ ಹೋಬಳಿ ಕಾಫಿ ಬೆಳೆಗಾರರ ಸಂಘದ ನೂತನ  ಕಛೇರಿ ಉದ್ಘಾಟನೆ ಮತ್ತು ಕಾಲೆಂಡರ್ ವಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.


   ಬೆಳೆಗಾರರು ಸರಕಾರಿ  ಭೂಮಿ ಕಬಳಿಸಿದೆ ಎಂಬ ಅಪಪ್ರಚಾರ ತುಂಭಾ ನೋವಿನ ಸಂಗತಿ ಕೃಷಿ ಭೂಮಿಗೆ ಹೊಂದಿಕ್ಕೊಂಡಂತಹ  ಬರಡು ಭೂಮಿಯಲ್ಲಿ  ಕಾಡು ಬೆಳೆಯುವ ಬದಲು ಕೃಷಿ ಮಾಡಿದೆ. ಹಾಗೂ ಸದರಿ ಜಮೀನಿನಿಂದ ಕೋಟ್ಯಾಂತರ ರುಪಾಯಿಗಳ ಕಂದಾಯ ಕೂಡ ಸತಕಾರಕ್ಕೆ ಪಾವತಿಸಲಾಗುತ್ತಿದೆ.   ಈ ಹಿಂದಿನ ಸರ್ಕಾರ  ಭರವಸೆ ನೀಡಿದಂತೆ ಕೇರಳ ಮಾದರಿಯಲ್ಲಿ ಏಲಕ್ಕಿ ಮತ್ತು ಕಾಫಿ ಬೆಳೆಗಾರರಿಗೆ  ಲೀಸ್ ಆಧಾರದಲ್ಲಿ ಈ ಭೂಮಿ  ನೀಡುವಂತಹ ಕ್ರಮ ಸರ್ಕಾರ  ಕೈಗೊಳ್ಳ ಬೇಕೆಂದು ಒತ್ತಯಿಸಿದರು.  

      ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ಮಾತನಾಡಿದ  ತಹಸಿಲ್ದಾರ್ ಜಯಕುಮಾರ್  ಕಸಬಾ ಬೆಳೆಗಾರರ ಸಂಘ ಹೊರ ತಂದಿರುವ ಕ್ಯಾಲೆಂಡರ್  ಉತ್ತಮ ಮಾಹಿತಿ ಹೊಂದಿದ್ದು ಕಾಫಿ ಕೃಷಿ ಚಟುವಟಿಕೆಗಳ ಸಂಪೂರ್ಣವಾದ ಮಾಹಿತಿ ಇದ ಎಂದರು.  ಬೆಳೆಗಾರ ಸಂಘಟನೆಗಳ ಸಹಕಾರ ಇದ್ದ ಕಾರಣ ಈ ಬಾರಿಯ ಬೆಳೆ ಪರಿಹಾರ ತ್ವರಿತ ಗತಿಯಲ್ಲಿ ಇತ್ಯರ್ಧ ಗೊಳಿಸಿ ಬೆಳೆಗಾರರಿಗೆ ತಲುಪಿಸಲು ಸಾಧ್ಯವಾಗಿದೆ.  ಸಂಘಟನೆಗಳು ಸರ್ಕಾರ ಮತ್ತು ಬೆಳೆಗಾರರ ಮದ್ಯೆ ಕೊಂಡಿಯಾಗಿ ನಿಲ್ಲುವ ಮೂಲಕ ಸರ್ಕಾರದ ಎಲ್ಲಾ ಯೋಜನೆಗಳು ಅರ್ಹ ಫಲಾನುಭಾವಿಗಳಿಗೆ ತಲುಪಿಸಲು ಸಹಕಾರಿಯಾಗಲಿದೆ ಎಂದರು. ಸ್ವತಹಾ ತಾನೆ ಬೆಳೆಗಾರನಾಗಿರುವುದರಿಂದ ಬೆಳೆಗಾರರ ಕಷ್ಟಗಳ ಬಗ್ಗೆ ಹೆಚ್ಚಿನ ಜ್ಞಾನವಿದ್ದು ಪಾರದರ್ಶಕ ಆಡಳಿತ ಮತ್ತು ಸಹಕಾರ ನೀಡುವುದಾಗಿ ತಿಳಿಸಿದರು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಸಬಾ ಹೋಬಳಿ  ಕಾಫೀ ಬೆಳೆಗಾರರ ಸಂಘದ ಅಧ್ಯಕ್ಷ  ಕೌಡಳ್ಳಿ ಲೋಹಿತ್ ಮಾತನಾಡಿ  ಕಳೆದ ಹಲವು ವರ್ಷಗಳಿಂದ ಸಾಮಾನ್ಯ ಮತ್ತು ಅತಿ ಸಣ್ಣ ಬೆಳೆಗಾರರ ಸಮಸ್ಯೆಗೆ ತಳ ಮಟ್ಟದಿಂದ ಸ್ಪಂದಿಸಿ ಅವರ ಸಂಕಷ್ಟ ನಿವಾರಣೆಗೆ ಹೆಚ್ಚಿನ ಕ್ರಮ ವಹಿಸಿ ಯಶಸ್ಸು ಸಾಧಿಸಿದ ಕಸಬಾ ಬೆಳೆಗಾರರ ಸಂಘಕ್ಕೆ ಸ್ವಂತ ಕಛೇರಿ  ಈ ದಿನ ತೆರದಿರುವುದರಿಂದ ಗ್ರಾಮೀಣ ಭಾಗದ ಬೆಳೆಗಾರರಿಗೆ ಇನ್ನಷ್ಟು ಅನುಕೂಲವಾಗಲಿದೆ ಹಾಘು ಬೆಳೆಗಾರರು ಇದರ ಳಾಭ ಪಡೆಯ ಬೇಕೆಂದು ಮನವಿ ಮಾಡಿದರು.

  ಈ ಸಂದರ್ಭದಲ್ಲಿ ಕೆಜಿಎಫ್ ಕಾರ್ಯದರ್ಶಿ ಕೃಷ್ಣಪ್ಪ, ಕಸಬಾ  ಕಾಫೀ ಬೆಳೆಗಾರರ ಸಂಘದ ,ಕಾರ್ಯದರ್ಶಿ ಚಂದ್ರ ಶೇಖರ್, ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಕಾರ್ಯದರ್ಶಿ ಎಂ‌ಬಿ.ರಾಜೀವ್ , ಕಸಬಾ ಬೆಳೆಗಾರ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್   ಹೆಬ್ಬಸಾಲೆ,ಬೆಳೆಗಾರ ಪತ್ರಿಕೆ ಸಂಪಾದಕ ಸುರೇಂದ್ರ . ಮಣ್ಣು ಪರೀಕ್ಷಾ ಕೇಂದ್ರ ನಿರ್ಧೇಶಕ . ವೈ. ಎಸ್.ಗಿರೀಶ್, ರಮೇಶ್ ಹಲಸುಲಿಗೆ, ಹಾಗೂ ಬೆಳೆಗಾರ ಮುಖಂಡರುಗಳು ಉಪಸ್ಧಿತರಿದ್ದರು

Post a Comment

Previous Post Next Post