ಹಾಸನದ ಜಿಲ್ಲಾ ಕಾರಾಗೃಹದಲ್ಲಿ ಕಳೆದ ಸುಮಾರು ಐದೂವರೆ ವರ್ಷಗಳಲ್ಲಿ ಕಾರಾಗೃಹದ ನರ್ಸರಿಯಲ್ಲಿ ಸುಮಾರು 9,000 ಗಿಡಗಳನ್ನು ಬೆಳೆಸಿ ಸಾರ್ವಜನಿಕರು, ವಿವಿಧ ಸಂಘ – ಸಂಸ್ಥೆಗಳಿಗೆ ವಿತರಿಸಲಾಗಿದೆ. ಆಸಕ್ತ ಕೈದಿಗಳೇ ಪ್ರತಿದಿನ ಅರ್ಧ ತಾಸು ನರ್ಸರಿ ನಿರ್ವಹಣೆ ಮಾಡಿದ್ದಾರೆ. ಅದೇ ರೀತಿ ಮಂಗಳೂರಿನ ಕಾರಾಗೃಹದಲ್ಲಿಯೂ ಆಸಕ್ತ ವಿಚಾರಣಾಧೀನ ಕೈದಿಗಳನ್ನು ನರ್ಸರಿ ಕೆಲಸದಲ್ಲಿ ತೊಡಗಿಸುವ ಉದ್ದೇಶ ಹೊಂದಲಾಗಿದೆ. ಸ್ಥಳೀಯವಾಗಿ ಬೇಡಿಕೆ ಇರುವ, ಸುಲಭವಾಗಿ ನಿರ್ವಹಿಸಬಹುದಾದ ಗಿಡಗಳನ್ನು ಬೆಳೆಸಲು ಚಿಂತನೆ ನಡೆಸಲಾಗಿದೆ.
Tags
ಹಾಸನ