ರಾಮೇನಹಳ್ಳಿ ತ್ರಿಲಿಂಗರಾಮೇಶ್ವರ ಜಾತ್ರೆ ಜನವರಿ ೨ ರಂದು

ಬೇಲೂರು

ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಲಿ ರಾಮೇನಹಳ್ಳಿ ಗ್ರಾಮದ ಸಮೀಪವಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಗಂಜಿಗೆರೆ ತ್ರಿಲಿಂಗರಾಮೇಶ್ವರ ಎಳ್ಳುಅಮಾವಾಸ್ಸೆ ಜಾತ್ರಾಮಹೋತ್ಸವವು ಜನವರಿ ೨ ರಂದು ಭಾನುವಾರ ನಡೆಯಲಿದೆ ಎಂದು ದೇಗುಲ ಅಭಿವೃದ್ಧಿ ಸಮಿತಿ ಟ್ರಸ್ಟ್ ಅಧ್ಯಕ್ಷ ಕಲ್ಯಾಣಕುಮಾರ್ ತಿಳಿಸಿದ್ದಾರೆ.


ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಜಾತ್ರಾಮಹೋತ್ಸವದಂದು ಬೆಳಿಗ್ಗೆಯಿಂದಲೇ ಪೂಜೆ, ಅಭಿಷೇಕ, ಹೋಮ ಇತ್ಯಾದಿಗಳು ನಡೆಯಲಿದೆ. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ೯೬೧೧೦೭೦೩೧೮ ಸಂಪರ್ಕಿಸಲು ಮನವಿ ಮಾಡಿದ್ದಾರೆ.

ತ್ರಿಲಿಂಗರಾಮೇಶ್ವರ ದೇವರು


Post a Comment

Previous Post Next Post