ಹಾಸನ: ಕ್ಷುಲ್ಲಕ ಕಾರಣಕ್ಕೆ ಅಣ್ಣ ತಮ್ಮನ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಅರಸೀಕೆರೆ ತಾಲ್ಲೂಕಿನ ದುಮ್ಮೇನಹಳ್ಳಿ ಕಾಲೋನಿಯಲ್ಲಿ ನಡೆದಿದೆ. ಯತೀಶ್ (37) ಕೊಲೆಯಾದ ವ್ಯಕ್ತಿ.
ಆರೋಪಿ ಅಣ್ಣ ಹನುಮಂತಯ್ಯ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದನಂತೆ.
ನಿನ್ನೆ ಕೂಡ ಯತೀಶ್ ಮನೆಯ ಹೊರಗೆ ಫೋನ್ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಕುಸಿದ ಮತ್ತಿನಲ್ಲಿ ಹನುಮಂತಯ್ಯ ಏಕಾಏಕಿ ಚಾಕುವನ್ನು ಹಿಡಿದುಕೊಂಡು ಬಂದು ನನಗೆ ಬೈಯುತ್ತಿದ್ದೀಯಾ ಎಂದು ತಮ್ಮನ ಮೇಲೆ ಎರಗಿದ್ದಾನೆ.
ಅಣ್ಣ-ತಮ್ಮನ ನಡುವೆ ಗಲಾಟೆ ಅತಿರೇಕಕ್ಕೆ ಹೋಗಿ ಕೊನೆಗೆ ತಮ್ಮನನ್ನೇ ಅಣ್ಣ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಆರೋಪಿ ಅಣ್ಣನನ್ನು ಅರೆಸ್ಟ್ ಮಾಡಿದ್ದಾರೆ.