ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ ಹಾಸನ ಇವರು ಶ್ರೀ ಜಗದೀಶ್ ರಾಮಘಟ್ಟ, ರಂಗನಟರು ಹಾಗೂ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಾಯ ಹೋಬಳಿ ಘಟಕ, ಗೊರೂರು ಇವರ ಪ್ರಾಯೋಜಕತ್ವದಲ್ಲಿ ಹಾಸನಾಂಬ ಥಿಯೋಸಾಫೀಕಲ್ ಸೊಸೈಟಿ ವಾಣಿವಿಲಾಸ ರಸ್ತೆ, ನಗರ ಕೇಂದ್ರ ಗ್ರಂಥಾಲಯ ಹಿಂಭಾಗ, ಪ್ರಾಚ್ಯವಸ್ತು ಸಂಗ್ರಹಾಲಯಕಟ್ಟಡ ಪಕ್ಕ ಇಲ್ಲಿ ನಾಡಿನ ಖ್ಯಾತ ಖಗೋಳ ಶಾಸ್ತ್ರಜ್ಞರು, ರಾಮಾಯಣ ಮಹಾಭಾರತ ಅಧ್ಯಯನ ಗ್ರಂಥಕರ್ತ ವಿದ್ವಾಂಸರು, ಸ್ವಾತಂತ್ರ್ಯ ಹೋರಾಟಗಾರರು ಗೊರೂರು ಸಾಹುಕಾರ್ ಶ್ರೀ ಜಿ.ಎಸ್. ಸಂಪತ್ತಯ್ಯಂಗಾರ್ ಅವರ ಸ್ವಾತಂತ್ರ್ಯ ಹೋರಾಟದ ಬದುಕು ಮತ್ತು ಬರಹ ಕುರಿತು ದಿನಾಂಕ 6/8/2023ರಂದು ಭಾನುವಾರ ಮದ್ಯಾಹ್ನ 3.30ಕ್ಕೆ ಡಾ. ಎಂ.ಆರ್.ಚಂದ್ರಶೇಖರ್, ಹಾಸನ, ನಿವೃತ್ತ ಪ್ರಾಂಶುಪಾಲರು, ಎ.ಎನ್.ವರದರಾಜುಲು ಪ್ರಥಮ ದರ್ಜೆ ಕಾಲೇಜು, ಗೊರೂರುರವರಿಂದ ಉಪನ್ಯಾಸ ಹಾಗೂ ಆಗಮಿತ ಕವಿಗಳಿಂದ ಕವಿಗೋಷ್ಠಿ, ಗಾಯಕರು ಕಲಾವಿದರಿಂದ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖೈಯಲ್ಲಿ ಸಾಹಿತ್ಯಾಸಕ್ತರು ಹಾಗೂ ಕಲಾಭಿಮಾನಿಗಳು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು ಗೊರೂರು ಅನಂತರಾಜು ಕೋರಿದ್ದಾರೆ.
Tags
ಹಾಸನ