ಅರಸೀಕೆರೆ ನಗರದಲ್ಲಿ ಶ್ರೀರಾಮ ಮಂದಿರದಲ್ಲಿ ಸೀತಾ ಮಹಿಳಾ ಸಂಘದಿಂದ ಆಯೋಜಿಸಿದ್ದ ಆಹಾರ ಮೇಳ ಯಶಸ್ವಿ

 ಅರಸೀಕೆರೆ: ಶುಚಿತ್ವ ಮತ್ತು ಗುಣಮಟ್ಟದ ತಿನಿಸುಗಳಿಗೆ ಪ್ರಚಾರ ಬೇಕಿರುವುದಿಲ್ಲ ಸೀತಾ ಮಹಿಳಾ ಸಂಘದವರು ಈ ಒಂದು ಮೇಳವನ್ನು ಪ್ರತಿವರ್ಷ ಅಚ್ಚುಕಟ್ಟಾಗಿ ಆಯೋಜಿಸುತ್ತಾ ಬಂದಿದ್ದೀರಿ ಇಲ್ಲಿ ಹಣ ಗಳಿಕೆ ಮುಖ್ಯವಲ್ಲ  ವಿವಿಧ ರೀತಿಯ ತಿನಿಸುಗಳನ್ನು ಕರಕುಶಲ ವಸ್ತುಗಳ ಸ್ಟಾಲ್ ಗಳನ್ನು ಹಾಕುವ ಮೂಲಕ ತಿನ್ನಿಸುಗಳ ತಯಾರಿಕೆ ಮತ್ತು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ನಿಮ್ಮ ನೈಪುಣ್ಯತೆಯನ್ನು ಇಲ್ಲಿ ತೋರಿದ್ದೀರಿ ಎಂದು ವಿಜಯಲಕ್ಷ್ಮಿ ಹೇಳಿದರು.

 ನಗರದಲ್ಲಿ ಸೀತಾ ಮಹಿಳಾ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ನಗರ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ ಆಹಾರ ಮೇಳವನ್ನು ವಿಜಯಲಕ್ಷ್ಮಿ ಉದ್ಘಾಟಿಸಿ ಮಾತನಾಡಿದವರು ಇದು ವ್ಯವಹಾರಿಕ ಜ್ಞಾನವನ್ನು ವೃದ್ಧಿಸುತ್ತದೆ ಮತ್ತು ಯಾವುದಕ್ಕೆ ಬೇಡಿಕೆ ಇದೆ ಎಂಬುದನ್ನು ಅರಿಯಲು ಹಾಗೂ ಮುಂದಿನ ದಿನಗಳಲ್ಲಿ ಬೇಡಿಕೆ  ಇರುವ ತಿನಿಸು ಉಪಹಾರಗಳನ್ನು  ತಯಾರಿಸುವ ಬಗ್ಗೆಯೂ ಸಹಕಾರಿಯಾಗುತ್ತದೆ ಎಂದುರು.

ಮೇಳದಲ್ಲಿ ಕೋಡುಬಳೆ ನಿಪ್ಪಟ್ಟು ಬಿಸಿ ಬಿಸಿ ದೋಸೆ ಚರ್ಮುರಿ ಪಾನಿ ಪುರಿ ಸಿಹಿ ತಿನಿಸುಗಳು ಬಿಸಿ ಬಿಸಿ ಬಜ್ಜಿ, ಮಸಾಲ ರೊಟ್ಟಿ, ಗೌರಿ ಗಣೇಶ ಹಬ್ಬಕ್ಕೆ ಬೇಕಾಗುವ ಹತ್ತಿಯ ಆಹಾರಗಳು, ಸಿರಿಧಾನ್ಯ ಪರಿಶುದ್ಧವಾದ ನೆಲಗಡಲೆಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಹೀಗೆ ಹಲವಾರು ತಿನಿಸುಗಳು ಗ್ರಾಹಕರನ್ನ ಆಕರ್ಷಿಸುತ್ತಿತ್ತು ಗ್ರಾಹಕರು ಬಂಧುಗಳೇ ಆಗಿರಲಿ ಸ್ನೇಹಿತರೆ ಆಗಿರಲಿ ಮಾರಾಟಗಾರರಂತೂ ವ್ಯವಹಾರಿಕವಾಗಿಯೇ ವ್ಯವಹರಿಸಿದರು ಎಲ್ಲರಲ್ಲೂ ಏನೋ ಒಂದು ಸಂತೋಷ ಖುಷಿ ನಿರೀಕ್ಷೆಯಲ್ಲಿ ನಿರೀಕ್ಷಿಸಲಾಗದಷ್ಟು ಗ್ರಾಹಕರ ಆಗಮನದಿಂದಾಗಿ ಕೆಲವು ಸ್ಟಾಲ್ ಗಳು. ಬೇಗನೆ ಮುಚ್ಚಿದವು  ಮೋಡ ಕವಿದ  ತಂಪಾದ ವಾತಾವರಣ ಬಿಸಿ ಬಿಸಿ ತಿನ್ನಿಸುಗಳಿಗೆ ಪ್ರೋತ್ಸಾಹ ನೀಡಿದಂತಿತ್ತು

 ಕಾರ್ಯಕ್ರಮದಲ್ಲಿ    ತಾಲ್ಲೂಕ್ ಬ್ರಾಹ್ಮಣ ಸಂಘದ  ಅಧ್ಯಕ್ಷ ಕೆ ರಮೇಶ್  ಶ್ರೀ ಗಾಯಿತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರೀಶ್ ವಿಪ್ರ ನೌಕರರ ಸಂಘದ ಅಧ್ಯಕ್ಷ ಮೋಹನ್  ಸೀತಾ ಮಹಿಳಾ ಸಂಘದ ಉಪಾಧ್ಯಕ್ಷೆ ಗೀತಾ ರಮೇಶ್,  ಕಾರ್ಯದರ್ಶಿ ವಸಂತ ಕೃಷ್ಣಮೂರ್ತಿ ,  ಖಜಾಂಚಿ ಮಮತಾ ಶ್ರೀನಿವಾಸ್  ಉಪಸ್ಥಿತರಿದ್ದರು

 

Post a Comment

Previous Post Next Post