ನಗರದಲ್ಲಿ ಸಂಚಾರ ನಿಯಮ ಕಟ್ಟುನಿಟ್ಟಿನ ಅನುಷ್ಠಾನ.ಡಿ.ವೈ.ಎಸ್.ಪಿ


 ಹಾಸನ‌ ನಗರದಲ್ಲಿ ಜೂ 10 ರಿಂದ ಸಂಚಾರ ನಿಯಮ ಕಟ್ಟು ನಿಟ್ಟಿನ ಪಾಲನೆ ಅಗತ್ಯ ಎಂದು  ಉಪ ಪೋಲಿಸ್ ಅಧೀಕ್ಷಕರಾದ ಉದಯ ಭಾಸ್ಕರ್   ತಿಳಿಸಿದ್ದಾರೆ.
ನಗರದಲ್ಲಿ ‌ಸಂಚಾರ ನಿಯಮ‌ ಉಲ್ಲಂಘನೆ ಹೆಚ್ಚಿರುವುದರಿಂದ ತಪಾಸಣೆ ಹಾಗೂ ಅನುಷ್ಠಾನಕ್ಕೆ ನಗರದಲ್ಲಿ 30 ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗುತ್ತಿದೆ ಎಂದು ಉದಯ ಭಾಸ್ಕರ್ ತಿಳಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯ.
ಲಘು ಮೋಟಾರ್ ವಾಹನಗಳಲ್ಲಿ ಸೀಟ್ ಬೆಲ್ಟ್  ಹಾಕಿ  ವಾಹನ ಚಲಾಯಿಸಬೇಕು ಇದರೊಂದಿಗೆ ಇತರ ಸಂಚಾರ ನಿಯಮ ಪಾಲನೆ ಮಾಡಲೇ ಬೇಕು ಎಂದು  ಡಿ .ವೈ.ಎಸ್ ಪಿ  ಮಾಹಿತಿ ನೀಡಿದ್ದಾರೆ

Post a Comment

Previous Post Next Post