ನಾಳೆಯಿಂದ ಅರೇಹಳ್ಳಿ ಸಂತೆ ಮೈದಾನದಲ್ಲೇ ಅಹೋರಾತ್ರಿ ಧರಣಿ: ಅರೇಹಳ್ಳಿ ನಿಂಗರಾಜು

 ಹಾಸನ : ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದ ಸರ್ವೆ ನಂಬರ್ ೧೩ ರಲ್ಲಿರುವ ೩೬ ಗುಂಟೆ ಸಂತೆ ಮೈದಾನನ ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸಿ ನಂತರ ಹಳ್ಳಿಸಂತೆ ಮಾರುಕಟ್ಟೆ ನಿರ್ಮಾಣ ಮಾಡಲು ಆಗ್ರಹಿಸಿ ನಾಳೆಯಿಂದ ಸಂತೆ ಮೈದಾನದ ಬಳಿಯೇ  ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ದಸಂಸ ಮುಖಂಡ ಅರೇಹಳ್ಳಿ ನಿಂಗರಾಜು ಎಚ್ಚರಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದ ಸರ್ವೆ ನಂಬರ್ ೧೩ ರಲ್ಲಿ ೩೬ ಗುಂಟೆ ಜಾಗದಲ್ಲಿ ಸಂತೆ ಮೈದಾನಕ್ಕೆ ಮೀಸಲಿರಿಸಿದ್ದು, ಈ ಜಾಗದಲ್ಲಿ ಖಾಸಗಿ ವ್ಯಕ್ತಿಗಳಾದ ಸುಂದರ್ ರೈ ತಂದೆ ತುಕ್ರಪ್ಪ ರೈ, ಹಪ್ಪಿ ಕೋಂ ಸುಂದರ್ ರೈ ಇವರ ಮಗಳಾದ ಅರೇಹಳ್ಳಿ ಗ್ರಾ.ಪಂ ನಲ್ಲಿ ಬಿಲ್ ಕಲೆಕ್ಟರ್ ರೂಪ ಎಂಬುವವರು ಪಂಚಾಯಿತಿಯಲ್ಲಿ ಇದ್ದುಕೊಂಡೆ ಸರ್ಕಾರಿ ಬೋರ್‌ವೆಲ್  ಕೊಳವೆ ಬಾವಿ ಮುಚ್ಚಿ ಕೋಳಿ ಅಂಗಡಿ ತೆರೆದು ಪರವಾನಗಿ ಪಡೆದು, ಸುಮಾರು ಕೋಟ್ಯಾಂತರ  ರೂ ಬೆಲೆಬಾಳು ೧೦ ಗುಂಟೆ ಜಾಗವನ್ನು ಒತ್ತುವರಿ ಮಾಡಿದ್ದಾರೆ. 



ಇವರ ಸಂಬಂಧಿಕರು ಅರೇಹಳ್ಳಿ ಗ್ರಾ.ಪಂ ಸದಸ್ಯರಾಗಿದ್ದು, ಒತ್ತುವರಿಗೆ ಬೆಂಬಲ ನೀಡುತ್ತಿದ್ದಾರೆ.  ಇದರ ಬಗ್ಗೆ ಸಾಕಷ್ಟು ಭಾರಿ ಸಂಬಂಧಿಸಿದ ಅಧಿಕಾರಿಗಳಿಗೆ  ಮನವಿ ಮಾಡಿದರು ಪ್ರತಿಭಟನೆ ಮಾಡಿದ್ದರು ಯಾವುದೇ ಕ್ರಮಕೈಗೊಂಡಿಲ್ಲ. ಇದೇ ಸರ್ವೆ ನಂಬರ್ ೧೩ ರಲ್ಲಿ ಜ್ಯೋತಿ ಮೋಹನ್, ಕರೀಂ ಸಾಬ್, ಇನ್ನಿತರರು ಸಂತೆ ಜಾಗವನ್ನು ಒತ್ತುವರಿ ಮಾಡಿರುವುದು ಸರ್ವೆ ಮೂಲಕ ಸಾಭಿತಾಗಿದೆ ಎಂದರು.

ಪ್ರಗತಿಪರ ಸಂಘಟನೆಗಳು ಈ ಕುರಿತು ಬೃಹತ್ ಪ್ರತಿಭಟನೆ ನಡೆಸಿದರು ಮನವಿ ಸಲ್ಲಿಸಿದರು, ಶಾಸಕರ ಗಮನಕ್ಕೆ ಮೂರು ಭಾರಿ ಸಭೆಯಲ್ಲಿ ತಂದಿದ್ದರು ಸಹ ಒತ್ತುವರಿ ತೆರವುಗೊಳಿಸದೆ ಒತ್ತುವರಿದಾರರಿಗೆ ಅನುಕೂಲವಾಗಲೆಂದು ಅರೇಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರುಗಳು ಶಾಸಕರ ಹೆಸರು ಬಳಸಿಕೊಂಡು ರಸ್ತೆ ಬದಿ ಇರುವ ೬ ಗುಂಟೆ ಜಾಗದಲ್ಲಿ ಹಳ್ಳಿ ಸಂತೆ ನಿರ್ಮಿಸಲು ಮುಂದಾಗಿರುವುದು ಖಂಡನೀಯ ಎಂದರು.

 ಒತ್ತುವರಿದಾರರಿಗೆ ಶಾಸಕರು ಬೆಂಬಲ ನೀಡಿದರೆ  ಶಾಸಕರ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಈ ಹಳ್ಳಿ ಸಂತೆ ಕಟ್ಟಡ ನಿರ್ಮಿಸುತ್ತಿರುವ ಸ್ಥಳವನ್ನು ಬದಲಾಯಿಸಿ ಒತ್ತುವರಿ ತೆರವುಗೊಳಿಸುವ ಜಾಗದಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ಸಂತೆ ಮೈದಾನ ವಿಶಾಲಗೊಳ್ಳುವ ಉದ್ದೇಶದಿಂದ ಕಟ್ಟಡವನ್ನು ಇದೇ ಸ.ನಂ ೧೩ ರ  ಒತ್ತುವರಿ ಜಾಗದಲ್ಲಿ ನಿರ್ಮಾಣ  ಮಾಡುವಂತೆ ಪ್ರಗತಿಪರ ಸಂಘಟನೆಗಳ ಒತ್ತಾಯವಾಗಿದೆ.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ಮಾತನಾಡಿ, ಈಗಾಗಲೇ ಮೇಲಾಧಿಕಾರಿಗಳಿಗೆ ದಾಖಲಾತಿಗಳ ಸಮೇತ ದೂರು ನೀಡಲಾಗಿದೆ, ಹೋರಾಟ ಮಾಡಲಾಗಿದೆ. ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೂ ಸಹ ಅಧಿಕಾರಿಗಳು ಗ್ರಾ.ಪಂ ಸದಸ್ಯರುಗಳ ಕುಮ್ಮಕ್ಕಿನಿಂದ  ಸರ್ಕಾರಿ ಸೇವೆಯಲ್ಲಿ  ಇರುವವರೇ ಸರ್ಕಾರಿ ಆಸ್ತಿ ಕಾಪಾಡುವುದನ್ನು ಬಿಟ್ಟು ಒತ್ತುವರಿದಾರರ ಬೆಂಬಲಕ್ಕೆ ನಿಂತಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಈ ವಿಚಾರವಾಗಿ ಲೋಕಯುಕ್ತಕ್ಕೂ ದೂರು ನೀಡಲಾಗಿದೆ.  ಜಿಲ್ಲಾ ಪಂಚಾಯಿತಿಗೂ ಮನವಿ ಮಾಡಲಾಗಿದೆ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ ಎಂದರು 

 ಅರೇಹಳ್ಳಿಯಲ್ಲಿ ಮೂರು ಭಾರಿ ಪ್ರತಿಭಟನೆ ನಡೆಸಿದರು ಯಾವುದೇ ಕ್ರಮ ಕೈಗೊಳ್ಳದ ಕಾರಣ  ಮುಂದಿನ ದಿನಗಳಲ್ಲಿ ಹಳ್ಳಿ ಸಂತೆ ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿಯೇ ಅಹೋರಾತ್ರಿ ಧರಣಿ ಮಾಡುವ ಕುರಿತು  ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಈಗಾಗಲೇ ಈ ವಿವಾದ ಕುರಿತಂತೆ ಗ್ರಾ.ಪಂ ಸದಸ್ಯರುಗಳು, ಸಾರ್ವಜನಿಕರು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡುವ ಮೂಲಕ  ಹೋರಾಟಗಾರರಿಗೆ ಬೆದರಿಕೆ ಹಾಕುತ್ತ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಸದಸ್ಯರು  ಹೇಳುವ ಬೆದರಿಕೆಗೆ ನಾವು ಎದರುವುದಿಲ್ಲ. ಕಾನೂನಾತ್ಮಕ ಹೋರಾಟ ನಮ್ಮದಾಗಿರುತ್ತದೆ.  ಅರೇಹಳ್ಳಿಯ ಸಾರ್ವಜನಿಕರು ಗ್ರಾ.ಪಂ  ನೀಡುವ ಸುಳ್ಳು ಮಾಹಿತಿಗೆ ಕಿವಿಕೊಡದೆ ಸಂತೆ ಜಾಗ ಉಳಿವಿಗೆ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ಪಾಲಾಕ್ಷ,  ಅಣ್ಣಪ್ಪ, ಪಾಲಾಕ್ಷ ಇತರರು ಇದ್ದರು

Post a Comment

Previous Post Next Post