ಜಮೀನು ಉಳುಮೆ ಮಾಡಿದ ವಿಚಾರದಲ್ಲಿ ಹಲ್ಲೆ.

ದಿನಾಂಕ:೦೫-೦೬-೨೦೨೦ ರಂದು ಮಧ್ಯಾಹ್ನ ೧-೪೫ ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕ್
ಕೆ.ಜಿ.ಕೊಪ್ಪಲುಗ್ರಾಮದ ವಾಸಿ ರವಿ ರವರು ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಜಗದೀಶ ಏಕೆ ಜಮೀನನ್ನು ಉಳುಮೆ ಮಾಡುತ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ದೊಣ್ಣೆಯಿಂದ ಎಡದ ಕೈಗೆ ಹೊಡೆದು ಊತಗೊಳಿಸಿ, ಕೈನಿಂದ ಕಪಾಲಕ್ಕೆ ಹೊಡೆದು, ಬಿಡಿಸಲು ಬಂದ ರವಿ ರವರ ಹೆಂಡತಿ ಸೌಮ್ಯಳಿಗೆ ಕಾಲಿನಿಂದ ಒದ್ದು ಹಾಗೂ ರವಿ ರವರ ತಾಯಿ ನಿಂಗಮ್ಮ ರವರಿಗೆ ಕೈನಿಂದ ಹೊಡೆದು ನೋವುಂಟು ಮಾಡಿದ್ದು, ಶೋಭಾರವರು ಸೌಮ್ಯ ರವರಿಗೆ ಕೈನಿಂದ ಹೊಡೆದು ನೋವುಂಟು ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪರ‍್ಯಾದಿ ರವಿ ರವರು ಅರಕಲಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ ಹಾಗೂ ಈ ಸಂಬAಧ ರವಿ ರವರ ಮೇಲೆ ಜಗದೀಶ ರವರು ಕೊಟ್ಟ ದೂರಿನ ಮೇರೆಗೆ ಪ್ರತಿ ಕೇಸು ದಾಖಲಿಸಿ ತನಿಖೆಯಲ್ಲಿರುತ್ತೆ.

Post a Comment

Previous Post Next Post