ಚಾಮರಾಜನಗರ, ಅ. 23- ತಾಲೂಕಿನ ಮುಕ್ಕಡಹಳ್ಳಿ ಗ್ರಾಮದ ಮಾಯಮ್ಮ ದೇವಿ ದೇವಸ್ಥಾನದ ಗೋಲಕವನ್ನು ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ನೇತೃತ್ವದಲ್ಲಿ ಇಂದು ತೆರೆದು ಎಣಿಕೆ ಮಾಡಲಾಯಿತು.
66 ಸಾವಿರ ರೂ.ಗಳು ಸಂಗ್ರಹ: ಮುಕ್ಕಡಹಳ್ಳಿ ಗ್ರಾಮದ ಮಾಯಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಎಣಿಕೆ ನಡೆಯಿತು. ಭಕ್ತರು ಕಾಣಿಕೆ ರೂಪದಲ್ಲಿ ದೇವಸ್ಥಾನದ ಗೋಲಕದಲ್ಲಿ 66 ಸಾವಿರ ರೂ.ಸಂಗ್ರಹ ವಾಗಿದೆ. ಈ ಹಣವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಹರವೆ ನಾಡ ಕಚೇರಿಯ ಉಪ ತಹಶೀಲ್ದಾರ್ ಮಹದೇವಶೆಟ್ಟಿ, ರಾಜಸ್ವ ನಿರೀಕ್ಷಕ ಎಂ. ಲಿಂಗರಾಜಮೂರ್ತಿ, ಹರವೆ ಹೋಬಳಿ ಗ್ರಾಮ ಲೆಕ್ಕಿಗರು ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.