ಚಿಕ್ಕಮಗಳೂರು : ಕಡೂರು ತಾಲೂಕಿನ ಹಲಸಿನಹಟ್ಟಿ ಎಂಬ ಗ್ರಾಮದಲ್ಲಿ ಪ್ರಯಾಣಿಕರ ಕಾರಿನ ಮೇಲೆ ಕಾಡಾನೆಯೊಂದು
ದಾಳಿ ನಡೆಸಿದ್ದು ಕಾರನ್ನು ಜಖಂ ಗೊಳಿಸಿದೆ ಮತ್ತು ಆನೆ ದಾಳಿಯಿಂದ ಕಾರಿನಲ್ಲಿ ಇದ್ದ ಭರತ್ ಹಾಗು ಶರತ್ ಎಂಬ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯರು ರಕ್ಷಿಸಿ ಚಿಕ್ಕಮಗಳೂರು ಜಿಲಾಸ್ಪತ್ರೆಗೆ ದಾಖಲಿಸಿದ್ದಾರೆ.