ಸೈಕಲ್ ನಲ್ಲೇ ದೇಶ ಪರ್ಯಟನೆ ಮಾಡುತ್ತಿರುವ ವೆಸ್ಟ್ ಬೆಂಗಾಲ್ ಮೂಲದ ಮದೈಪಾಲ್ ಇಂದು ಶ್ರವಣಬೆಳಗೊಳ ಮಾರ್ಗವಾಗಿ, ಹಾಸನ ನಗರಕ್ಕಿಂದು ಆಗಮಿಸಿದರು. ಈಗಾಗಲೇ ಹಲವು ರಾಜ್ಯಗಳ ಸುತ್ತಿ ಬಂದಿರುವ ಮದೈಪಾಲ್ ಕರ್ನಾಟಕದ ಒಂದೊಂದು ಜಿಲ್ಲೆಯು ವಿಶೇಷ ಎನಿಸುತ್ತಿದೆ. ನಾನು ಹಾಸನಕ್ಕೆ ಭೇಟಿ ನೀಡಿರುವುದು ನನ್ನ ಜೀವಮಾನದಲ್ಲಿ ಖುಷಿ ನೀಡಿದೆ ಎಂದು , ತಮ್ಮ ಅಭಿಪ್ರಾಯ ವನ್ನು ಹಾಸನ ನಗರದ ಜನತೆಯೊಂದಿಗೆ ನಗರದ ಸುಭಾಷ್ ಚೌಕ್ ಬಳಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನನ್ನ ಈ ಸೈಕಲ್ ಜಾಥಾವು ಸಂಚಾರಿ ನಿಯಮದ ಅನುಸಾರ ನಾವು ವಾಹನ ಓಡಿಸಿ. ಜೀವ ಉಳಿಸಿ ಬಾಳಬೇಕು ಎಂಬ ಸಂದೇಶ ನೀಡುವ ಮೂಲಕ ದೇಶಪೂರ್ತಿ ಸವಾರಿ ನಡೆಸೋದಾಗಿ ಹೇಳಿದರು.
Tags
ಹಾಸನ
