ಪ್ರೂಟ್ಸ್ ಹಾಗೂ ಕುಟುಂಬ ತಂತ್ರಾಂಶ ನೋಂದಣಿಗೆ ಹೆಚ್ಚಿನ ಕ್ರಮವಹಿಸುವಂತೆ :ಜಿಲ್ಲಾಧಿಕಾರಿ ಸೂಚನೆ


ಹಾಸನ :- ಪ್ರೂಟ್ಸ್ ಹಾಗೂ ಕುಟುಂಬ ತಂತ್ರಾAಶ ಅಂಕಿ ಅಂಶಗಳ  ನೋಂದಣಿಗೆ ಹೆಚ್ಚಿನ   ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್ . ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳೊಂದಿಗೆ  ಪ್ರೂಟ್ಸ್ ಹಾಗೂ ಕುಟುಂಬ  ತಂತ್ರಾAಶ ನೋಂದಣಿ ಹಾಗೂ  ಇನ್ನಿತರ ವಿಷಯಗಳ  ಕುರಿತು ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ರೈತರಿಗೆ ಅನುಕೂಲವಾಗುವಂತೆ ವಿವಿಧ ಆಹಾರ ಪದಾರ್ಥಗಳ ಖರೀದಿಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭದಲ್ಲಿ ಪರಿಹಾರ ವಿತರಣೆ,  ಬೆಳೆ ಸಮೀಕ್ಷೆ, ಬೆಳೆ ವಿಮೆ ಪರಿಹಾರ ನೀಡಲು ಪ್ರೂಟ್ಸ್  ತಂತ್ರಾAಶದ ನೋಂದಣಿಯನ್ನು ಹೆಚ್ಚಿಸಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೇಳಿದರು. 

ಜಿಲ್ಲೆಯಲ್ಲಿ ಪ್ರೂಟ್ಸ್ ತಂತ್ರಾAಶ ಮೂಲಕ  ೧೮ ಸಾವಿರ ಕ್ಕೂ ಹೆಚ್ಚಿನ ನೋಂದಣಿ ಮಾಡಲಾಗಿದ್ದು, ಕುಟುಂಬ ತಂತ್ರಾAಶದಲ್ಲಿ ೧೬ ಸಾವಿರ ನೋಂದಣಿ ಮಾಡಲಾಗಿದೆ ಇನ್ನೂ ಹೆಚ್ಚಿನ ನೋಂದಣಿಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಹೇಳಿದರು. 

 ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಇತರೆ ಇಲಾಖೆಗಳ ಮೂಲಕ ರೈತರ ಮಾಹಿತಿಯನ್ನು  ಪ್ರೂಟ್ಸ್ ನೋಂದಣಿ ಮಾಡುವಂತೆ  ತಿಳಿಸಿದರಲ್ಲದೆ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಹಳ್ಳಿಗಳನ್ನು ವಿಂಗಡಣೆ ಮಾಡಿಕೊಂಡು   ನೋಂದಣಿ ಮಾಡಲು ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದರು.

ಕುಟುಂಬ ತಂತ್ರಾAಶದ ಮೂಲಕ  ಈಗಾಗಲೇ ಮರಣ ಹೊಂದಿರುವ ವ್ಯಕ್ತಿಯನ್ನು  ಪಡಿತರ ಪಟ್ಟಿಯಿಂದ ರದ್ದುಗೊಳಿಸಲು ಮಾಹಿತಿಯನ್ನು  ಪಡೆಯಲು ನ್ಯಾಯಬೆಲೆ ಅಂಗಡಿ  ಮಾಲೀಕರ ಜೊತೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. 

ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಮಾತನಾಡಿ ಬಾಕಿ ಉಳಿದಿರುವ ನೋಂದಣಿಗಳ ಮಾಹಿತಿಗಳನ್ನು ಸಂಗ್ರಹಿಸಲು ಗ್ರಾಮ ಸಹಾಯಕರನ್ನು ಕಳುಹಿಸಿ ಆದಷ್ಟು ಬೇಗ ದಾಖಲೆಗಳನ್ನು ಸಂಗ್ರಹಿಸಿ ನೋಂದಣಿಗೆ ಕ್ರಮವಹಿಸುವಂತೆ ತಿಳಿಸಿದರು. 

ಇದೇ ವೇಳೆ ಜಿಲ್ಲೆಯಲ್ಲಿ ಕೊರೋನ ಸೋಂಕು ದನೇ ದಿನೇ ಹೆಚ್ಚಾಗುತ್ತಿರುವುದರಿಂದ ಯಾವುದೇ ಜಾತ್ರೆಗಳು ಹಾಗೂ ಧಾರ್ಮಿಕ ಹಬ್ಬಗಳ ಆಚರಣೆಗಳನ್ನು ಕಡ್ಡಾಯವಾಗಿ ನಿಷೇಧ ಮಾಡುವುದರ ಜೊತೆಗೆ ಆಚರಣೆಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಅವರು  ಅಧಿಕಾರಿಗಳಿಗೆ ಸೂಚಿಸಿದರು.  

ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್, ಜಂಟಿ ಕೃಷಿ ನಿರ್ದೇಶಕರಾದ ರವಿ, ತಹಸೀಲ್ದಾರ್ ಶಿವಶಂಕರಪ್ಪ,   ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಪುಟ್ಟಸ್ವಾಮಿ ಹಾಗೂ ಎಲ್ಲಾ ತಹಸೀಲ್ದಾರ್ ಗಳು ಮತ್ತಿತರ ಅಧಿಕಾರಿಗಳು ಹಾಜರಿದ್ದರು. 


Post a Comment

Previous Post Next Post