ಹಾಸನ ಏ.೧: ಮಾನಸಿಕ ಆರೋಗ್ಯವು ವ್ಯಕ್ತಿಯ ಸರ್ವತೋಮುಖ ಸಮತೋಲನವನ್ನು ಕಾಪಾಡುತ್ತದೆ. ಕಾನೂನಿನಲ್ಲಿ ಮಾನಸಿಕ ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗೆ ಸೂಕ್ತ ರಕ್ಷಣೆಯನ್ನು ಒದಗಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಬಿ.ಕೆ.ರವಿಕಾಂತ ರವರು ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಸನ , ವಕೀಲರ ಸಂಘ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರ, ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಹಾಸನ ಹಾಗೂ ಗ್ರಾಮ ಪಂಚಾಯಿತಿ, ಮಣಚನಹಳ್ಳಿ, ಇವರ ಸಂಯುಕ್ತಾಶ್ರಯದಲ್ಲಿ ಮಾನಸಿಕ ಆರೋಗ್ಯ ಕುರಿತು ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾನಸಿಕ ರೋಗಿಯ ಆಸ್ತಿ, ಸಂಪತ್ತು ಅಧಿಕಾರ ವ್ಯವರಣೆಯನ್ನು ಮಾಡಲು ನ್ಯಾಯಾಲಯವು ಸಂಬAಧಿಕರನ್ನು ಅಥವಾ ನ್ಯಾಯಾಲಯವು ನಂಬಿಕಸ್ಥರನ್ನು ನೇಮಿಸಲು ಅಧಿಕಾರವನ್ನು ಹೊಂದಿದೆ. ಮಾನಸಿಕ ರೋಗಿಯು ನೀಡುವ ಸಾಕ್ಷ÷್ಯವು ಊರ್ಜಿತವಾಗುವುದಿಲ್ಲ, ಮಾನಸಿಕ ರೋಗಿಯೊಂದಿಗಿನ ವಿವಾಹವು ಕಾನೂನಾತ್ಮಕವಾಗಿ ಸಿಂಧುವಾಗುವುದಿಲ್ಲ ಎಂದು ಹೇಳಿದರು.
ಮಾನಸಿಕ ಆರೋಗ್ಯದ ನಿರ್ವಹಣೆ ಎಂಬ ವಿಷಯವಾಗಿ ಉಪನ್ಯಾಸ ಮಾಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮಾನಸಿಕ ತಜ್ಞರಾದ ಡಾ|| ಸುನೀತಾ.ಕೆ.ಎಸ್ ರವರು ಮಾತನಾಡಿ ಪ್ರಸ್ತುತದಲ್ಲಿ ನಾವೆಲ್ಲರೂ ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದು ಒಂದಲ್ಲ ಒಂದು ರೀತಿಯ ಮಾನಸಿಕ ಕ್ಷೋಭೆಯಿಂದ ಬಳಲುತ್ತೀದ್ದೇವೆ. ಕೆಲವೊಂದು ಅಭ್ಯಾಸಗಳು, ರೂಢಿಗಳು ನಮ್ಮನ್ನು ಒತ್ತಡದಲ್ಲಿರಿಸುತ್ತಿದ್ದು ನಾವು ಅವುಗಳಿಂದ ದೂರ ಉಳಿಯಬೇಕಿದ್ದು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ಜೆ.ಪಿ. ಶೇಖರ್ ಮಾತನಾಡಿ ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಒತ್ತಡಲ್ಲಿ ಬದುಕುತ್ತಿದ್ದು ಮಾನಸಿಕವಾಗಿ ಬಳಲುತ್ತಿದ್ದೇವೆ. ಮೆದುಳು ಒತ್ತಡವನ್ನು ತಾಳಲಾರದೆ ನಿಷ್ಕಿçಯತೆಯನ್ನು ಹೊಂದಿತ್ತಿದೆ. ಇದರಿಂದ ಮಾನಸಿಕ ಖಾಯಿಲೆಯು ಸರ್ವೇ ಸಾಮಾನ್ಯ ವಾಗಿದೆ. ಆದರೂ ಗ್ರಾಮೀಣ ಭಾಗಗಳಲ್ಲಿ ಮಾನಸಿಕ ಸಮಸ್ಯೆಗೆ ಒಳಗಾದವರನ್ನು ಅನುಮಾನಾಸ್ಪದವಾಗಿ ನೋಡುವ ಕೇವಲವಾಗಿ ನೋಡುವ ಪರಿಪಾಟ ಇನ್ನೂ ಜೀವಂತವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಣಚನಹಳ್ಳಿ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಖಾ ಎಮ್. ಡಿ. ಡಾ.ವಿಜಯಕುಮಾರ್, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಕೇಂದ್ರದ ತರಬೇತುದಾರಾದ ವಿಜಯಲಕ್ಷಿ÷್ಮ, ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
