ಇಂದಿನ ರಾಶಿ ಭವಿಷ್ಯ ಇಲ್ಲಿದೆ ನೋಡಿ

ಶ್ರೀ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ತಾಯಿಯ  ಅನುಗ್ರಹದಿಂದ 
ಅಸಾಧ್ಯವಾದದ್ದು‌ ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ದಾಮೋದರ್ ಭಟ್ 
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ.ಸ್ತ್ರೀವಶೀಕರಣ ಮತ್ತು ಪುರುಷ ವಶೀಕರಣ ಮಾಡಿಕೊಡುತ್ತಾರೆ .ಶತ್ರುನಾಶ ಶತ್ರುಕಾಟ  ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ,ಗಂಡ ಹೆಂಡತಿ ಕಿರಿಕಿರಿ  ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9008993001 
ಮೇಷ:- ಅಕಾಲ ಭೋಜನದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ನಿಮ್ಮ ಪ್ರೀತಿಪಾತ್ರರಿಗೆ ಆರ್ಥಿಕ ನೆರವು ನೀಡುವಿರಿ. ಕೆಲ ಗ್ರಹಗಳ ಅಶುಭ ಸಂಚಾರದಿಂದ ಉದರ ಶೂಲೆಯಂತಹ ತೊಂದರೆ ಬರುವ ಸಾಧ್ಯತೆಯಿದೆ. ಆಂಜನೇಯ ಸ್ತೋತ್ರ ಪಠಿಸುವುದು ಒಳ್ಳೆಯದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆ ಇರಲಿ.

ವೃಷಭ:- ಆರಂಭದಲ್ಲಿ ವೇಗ ಪಡೆದಿದ್ದ ಕೆಲಸಗಳು ಅನಿರೀಕ್ಷಿತವಾಗಿ ವಿಳಂಬವಾಗುವುದು. ಸಂಗಾತಿಯ ಅಭಿಪ್ರಾಯಗಳನ್ನು ಅರಿತು ಕೆಲಸ ಮಾಡುವುದು ಒಳ್ಳೆಯದು. ಸಮಾಜ ಸೇವೆ ನಿಮ್ಮನ್ನು ಕೈಬೀಸಿ ಕರೆಯಲಿದೆ. ಸ್ನೇಹಿತರ ಮಗನಿಗೆ ಉದ್ಯೋಗ ಕೊಡಿಸುವುದರಲ್ಲಿ ಸಹಾಯ ಮಾಡುವಿರಿ.

ಮಿಥುನ:- ಹೊಸ ಮನೆ ಕಟ್ಟುವ ವಿಚಾರಕ್ಕೆ ಗ್ರಹಗಳು ಪೂರಕವಾಗಿವೆ. ಆತ್ಮವಿಶ್ವಾಸದ ಕೊರತೆಯನ್ನು ಸ್ನೇಹಿತರು ತುಂಬುವರು. ಕ್ರೀಡಾಪಟುಗಳಿಗೆ ಉತ್ತಮ ಅವಕಾಶದಿಂದ ಕ್ರೀಡೆಯಲ್ಲಿ ಜಯ ದೊರೆಯುವುದು.ಅಂದುಕೊಂಡ ಕೆಲಸಗಳು ಬಹಳ ಅಲ್ಪ ಶ್ರಮದಿಂದಲೇ ಈಡೇರಲಿವೆ. ವಾಹನಗಳಲ್ಲಿ ಚಲಿಸುವಾಗ ಎಚ್ಚರಿಕೆಯಿಂದಿರಿ.

ಕಟಕ:- ಮಾನಸಿಕ ಒತ್ತಡಗಳಿಂದ ದೂರ ಬರಲು ಆಂಜನೆಯ ಸ್ತೋತ್ರ ಪಠಿಸಿರಿ. ಕುಟುಂಬದ ಖರ್ಚು ವೆಚ್ಚಗಳಲ್ಲಿ ಕೆಲವೊಮ್ಮೆ ಭಾರಿ ವ್ಯತ್ಯಾಸ ಕಂಡುಬರುವುದು. ವಾರಾಂತ್ಯದಲ್ಲಿ ಆದಾಯದ ಮೂಲಗಳು ಹೆಚ್ಚಲಿವೆ. ಷೇರು ಮಾರುಕಟ್ಟೆಯಿಂದ ಕೆಲಕಾಲ ದೂರವಿರುವುದು ಒಳಿತು. ಯಾವುದೇ ವಿಷಯವನ್ನಾಗಲೀ ಅತಿ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಿರಿ.

ಸಿಂಹ:- ಆರ್ಥಿಕ ಸಂಕಷ್ಟದಿಂದ ದೂರವಾಗುವಿರಿ. ಅತಿಯಾದ ದೇಹಾಯಾಸ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಸಾಮಾಜಿಕ ಹೋರಾಟಕ್ಕೆ ಸ್ನೇಹಿತರು ಬೆಂಬಲ ಸೂಚಿಸುವರು. ಇದರಿಂದ ನಿಮಗೆ ಕೀರ್ತಿ ಬರುವುದು.

ಕನ್ಯಾ:- ಪ್ರತಿಭಾ ಪ್ರಕಾಶಕ್ಕೆ ಉತ್ತಮ ವೇದಿಕೆ ದೊರೆಯಲಿದೆ. ಬ್ಯಾಂಕಿನ ವ್ಯವಹಾರ ಸುಸೂತ್ರವಾಗಿ ಬಗೆಹರಿಯುವುದು. ವಾಹನ ಖರೀದಿಯನ್ನು ಈ ವಾರ ಮಾಡುವಿರಿ. ಕೌಟುಂಬಿಕ ಜೀವನ ಉತ್ತಮವಾಗಿರುವುದು. ಉದ್ಯೋಗದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಆರೋಗ್ಯದ ಸಮಸ್ಯೆಗಳ ಬಗ್ಗೆ ಅಲಕ್ಷ ಬೇಡ. ಮನೆ ವೈದ್ಯರನ್ನು ಭೇಟಿ ಮಾಡಿರಿ..

ತುಲಾ:- ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಬಹುದಿನಗಳಿಂದ ನಿರೀಕ್ಷಿಸಿದ್ದ ಶುಭ ಸಮಾಚಾರವೊಂದು ನಿಮಗೆ ಕೇಳಿ ಬರಲಿದೆ. ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಉದಾಸೀನತೆ ಬೇಡ. ಮಡದಿಗೆ ಉದರ ಸಂಬಂಧಿ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ. ಸೂಕ್ತ ವೈದ್ಯಕೀಯ ಉಪಚಾರದಿಂದ ಒಳಿತಾಗುವುದು. ಕೌಟುಂಬಿಕ ವಿಷಯಗಳಲ್ಲಿ ಭಾವನೆಗಳಿಗೆ ಈಡಾಗುವಿರಿ.

ವೃಶ್ಚಿಕ:- ಸಾಮಾಜಿಕವಾಗಿ ಸ್ವಕೀಯ ಜನರಿಂದ ಗುರುತಿಸಲ್ಪಡುವಿರಿ. ನೂತನ ಕಾರ್ಯಗಳನ್ನು ಆರಂಭಿಸುವಾಗ ಅಧೈರ್ಯ ತೋರದಿರಿ. ಪ್ರಯಾಣಗಳು ಸುಖಕರವಾಗಿದ್ದು ವಿಶೇಷ ಲಾಭವನ್ನುಂಟು ಮಾಡುವುದು. ಆರೋಗ್ಯದ ಕಡೆ ಗಮನ ಹರಿಸಿರಿ.

ಧನುಸ್ಸು:- ಯಾವುದೇ ವಿಷಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲದೇ ನಿಮ್ಮ ನಿರ್ಧಾರ ತಿಳಿಸಬೇಡಿ. ಸರ್ಕಾರದಿಂದ ಬರಬೇಕಾಗಿರುವ ಸಕಲ ಸವಲತ್ತು ದೊರೆಯಲಿದೆ. ಕಾರ್ಮಿಕ ವರ್ಗದವರಿಗೆ ಶುಭ ಸಮಾಚಾರ ಕೇಳಿಬರಲಿದೆ. ವ್ಯಾಪಾರದಲ್ಲಿ ಮೃದು ಧೋರಣೆ ಸಲ್ಲದು. ಕೌಟುಂಬಿಕ ಗೌಪ್ಯತೆ ಕಾಪಾಡಿಕೊಳ್ಳಿರಿ. ವೃತ್ತಿಪರ ಸಮಸ್ಯೆಗಳನ್ನು ನಿಮ್ಮ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿರಿ.

ಮಕರ:- ರೈತಾಪಿ ಜನರಿಗೆ ವ್ಯವಸಾಯದಿಂದ ಅಧಿಕ ಲಾಭವುಂಟಾಗುವುದು. ಬೇರೆಯವರಿಗೆ ವಹಿಸಿದ ಕಾರ್ಯಗಳು ಮಂದಗತಿಯಲ್ಲಿ ಸಾಗುವುದರಿಂದ ನಷ್ಟ ಅನುಭವಿಸಬೇಕಾಗುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಹರ-ಗುರುಗಳ ಕೃಪೆ ಪಡೆಯುವುದು ಒಳ್ಳೆಯದು. ನಿಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ತೀರ್ಪು ಕೊಡುವುದರಿಂದ ಮನಸ್ಸಿಗೆ ಕಿರಿಕಿರಿ ಎನಿಸುವುದು.

ಕುಂಭ:- ನೆರೆಹೊರೆಯವರ ಪ್ರೀತಿ ವಿಶ್ವಾಸವನ್ನು ಗಳಿಸಿರಿ. ಆಂಜನೇಯ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುವುದು ಒಳ್ಳೆಯದು. ಮಹತ್ತರ ಕೆಲಸಗಳನ್ನು ಮುಂದೂಡುವುದು ಒಳಿತು. ಪ್ರಯಾಣ ಕಾಲದಲ್ಲಿ ಲಕ್ಷ್ಮೀನಾರಸಿಂಹ ದೇವರನ್ನು ಸ್ಮರಿಸಿರಿ. ವೃತ್ತಿಯಲ್ಲಿ ನಿರಾಸಕ್ತಿ ಕಂಡುಬರುವುದು.

ಮೀನ:- ವ್ಯವಹಾರದಲ್ಲಾಗುವ ಬದಲಾವಣೆ ನಿಮ್ಮ ಹೊಣೆಯನ್ನು ಹೆಚ್ಚಿಸುವುದು. ಬದಲಾವಣೆಯನ್ನು ಮುಕ್ತವಾಗಿ ಸ್ವೀಕರಿಸಿರಿ. ಮಡದಿಯ ಆರೋಗ್ಯದಲ್ಲಿ ಅಲ್ಪಸ್ವಲ್ಪ ವ್ಯತ್ಯಯ ಕಂಡುಬರಲಿದೆ. ಭೂ ಸಂಬಂಧಿ ವ್ಯವಹಾರದಲ್ಲಿ ಲಾಭವಿದೆ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.

Post a Comment

Previous Post Next Post