ಹಾಸನ: ತಾಲೂಕಿನ ಭರತವಳ್ಳಿ ಬಳಿ ಗೊಬ್ಬರ ತುಂಬಿದ ಕ್ಯಾಂಟರ್ ವಾಹನವು ಪಲ್ಟಿಯಾಗಿದ್ದು, ಯಾವ ಸಾವು-ನೋವು ಸಂಭವಿಸಿರುವುದಿಲ್ಲ.
ಗೊಬ್ಬರ ತುಂಬಿದ ವಾಹನವು ಹಾಸನದ ಕಡೆ ವೇಗವಾಗಿ ಬರುತ್ತಿದ್ದಾಗ ಚಾಲಕನ ಕೈ ನಿಯಂತ್ರಣ ತಪ್ಪಿ ವಾಹನ ರಸ್ತೆ ಬದಿ ತಿರುಗಿ ಪಲ್ಟಿಯಾಗಿದೆ. ಒಳಗಿದ್ದ ಚಾಲಕನಿಗೆ ಯಾವ ದೊಡ್ಡದಾದ ಗಾಯಗಳಾಗದೆ ಚಿಕ್ಕ ಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ. ಗೊಬ್ಬರದ ಕೆಲ ಚೀಲಗಳು ಹೊಡೆದಿದ್ದರಿಂದ ಭೂಮಿಗೆ ಚೆಲ್ಲಾಪಿಲ್ಲಿ ಆಗಿದೆ.
Tags
ಹಾಸನ
