ಕೊರೋನಾ ಸೋಂಕು ಹರಡುತ್ತಿರುವುದಾಗಿ ಜನರು ಆತಂಕ ಪಡದೆ ಕೋವಿಡ್ ನಿಯಮಗಳನ್ನು ಪಾಲಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ಅವರು ತಮ್ಮ ಸ್ವಂತ ಅನುಭವಗಳನ್ನು ತಿಳಿಸಿದ್ದಾರೆ.
ನಮಗೆ ಗಂಟಲಿನ ವ್ಯತ್ಯಾಸ ಬಂದ ತಕ್ಷಣವೇ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದು ವರದಿಯು ಪಾಸಿಟಿವ್ ಎಂದು ಬಂದಾಗ ತಕ್ಷಣವೇ ಹೋಂ ಐಸೋಲೇಶನ್ ಮಾಡಿಕೊಂಡು ಸುಮಾರು ಹದಿನಾಲ್ಕು ದಿನಗಳ ಕಾಲ ಯಾರ ಬಳಿಯು ಸಹ ಸಂಪರ್ಕವನ್ನು ಹೊಂದದೆ ಜಿಲ್ಲೆಯ ಪ್ರತಿಯೊಂದು ವಿಚಾರಗಳನ್ನು ಫೋನ್ ಮೂಲಕ ತಿಳಿದುಕೊಂಡು ಇದರ ಮೂಲಕವೇ ಪ್ರತಿಕ್ರಿಯಿಸುತ್ತಿದ್ದೆ. ಹಾಗಾಗಿ ತಮ್ಮಿಂದ ಯಾರಿಗೂ ಸೋಂಕು ಹರಡಿಲ್ಲ, ಅಲ್ಲದೇ ಸಕಾಲದಲ್ಲಿ ನಡೆಸಿದ ತಪಾಸಣೆ ಹಾಗೂ ಚಿಕಿತ್ಸೆಯಿಂದ ಶೀಘ್ರಗುಣಮುಖವಾದೆ ಎಂದು ಎಸ್.ಪಿ. ಶ್ರಿನಿವಾಸ್ ಗೌಡ ಹೇಳಿದರು.
ನನಗೆ ಓದುವ ಹವ್ಯಾಸವಿದ್ದು ಪ್ರತಿದಿನ ಪುಸ್ತಕಗಳನ್ನು ಓದುವುದು, ಸಮಯ ಕಳೆಯಲು ಸಿನಿಮಾಗಳನ್ನು ನೋಡುವುದು, ಸ್ನೇಹಿತರೊಡನೆ ಹಾಗೂ ಮನೆಯವರೊಡನೆ ಫೋನ್ ಮೂಲಕ ಮಾತನಾಡುವುದು ಐಸೋಲೆಶನ್ ಇದ್ದ ಅವಧಿಯಲ್ಲಿ ನೆಮ್ಮದಿ ನೀಡುತ್ತಿತ್ತು.
ಅದೇ ರೀತಿ ಫೋನ್ನಲ್ಲಿ ಚೆಸ್ ಆಡುವುದು, ಧ್ಯಾನ ಹಾಗೂ ಯೋಗ ಮಾಡುವ ಮೂಲಕ ಹೆಚ್ಚು ಸಕ್ರಿಯವಾಗಿರುತ್ತದೆ ಇದು ನನ್ನ ದಿನಚರಿ ಆಗಿರುತ್ತಿತ್ತು. ಪಾಸಿಟಿವ್ ಬಂದ ಮೊದಲನೇ ದಿನದಿಂದಲೇ ವೈದ್ಯರು ಹೇಳಿದ ಔಷಧಗಳನ್ನು ಸರಿಯಾದ ರೀತಿ ತೆಗೆದುಕೊಳ್ಳುವುದು ಹಾಗೂ ಆದಷ್ಟು ಸಕಾರಾತ್ಮಕವಾಗಿ ಯೋಚನೆ ಮಾಡುವುದು ಸೂಕ್ತ.
ಮೊದಲನೆಯದಾಗಿ ಕೋವಿಡ್ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಲಸಿಕೆ ಪಡೆಯುವುದು, ಕೈಗಳನ್ನು ಸ್ವಚ್ಛಗೊಳಿಸುವುದು ಕಡ್ಡಾಯವಾಗಿ ಮಾಡುವುದರ ಮೂಲಕ ನಾವು ಕೊರೋನಾ ಹರಡದಂತೆ ತಡೆಯಬಹುದಾಗಿದೆ.
ಸೋಂಕು ಹೆಚ್ಚಾದ ನಂತರ ಆಸ್ಪತ್ರೆಗೆ ತೆರಳುವುದರಿಂದ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ತಕ್ಷಣವೇ ವೈದ್ಯರ ಬಳಿ ತೆರಳುವುದು ಸೂಕ್ತ. ಸೋಂಕಿತರು ಮನಸ್ಸನ್ನು ಆದಷ್ಟು ತಿಳಿಯಾಗಿ ಇಟ್ಟುಕೊಂಡು ಸಕಾರಾತ್ಮಕವಾಗಿ ಯೋಚಿಸಿ, ಒಳ್ಳೆಯ ವಿಚಾರಗಳ ಬಗ್ಗೆ ಚಿಂತನೆ ನಡೆಸಿ, ಖಿನ್ನತೆಗೆ ಒಳಗಾಗದಂತೆ ನೋಡಿಕೊಂಡರೆ ಸೋಂಕಿನಿAದ ಶೀಘ್ರವಾಗಿ ಗುಣಮುಖರಾಗಬಹುದು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊAಡಿದ್ದಾರೆ.
