ವೈದ್ಯರ ಮೇಲೆ ಹಲ್ಲೆ: ಮೂವರ ಸೆರೆ

ಚಿಕ್ಕಮಗಳೂರು: ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ .



ತರೀಕೆರೆ ಪಟ್ಟಣದ ವೈದ್ಯ ದೀಪಕ್ ಮೇಲೆ ದುಷ್ಕರ್ಮಿಗಳು  ಮಾರಣಾಂತಕ ಹಲ್ಲೆ ನಡೆಸಿದ್ದು  ವೈದ್ಯರನ್ನು  ವೈದ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು .
ತನಿಖೆ ನಡೆಸಿದ ಡಿವೈಎಸ್ಪಿ ನೇತೃತ್ವದ ತಂಡ  ಅತ್ತಿಗನಾಳಿನ  ವೇಣು  ಗೋಪಾಲ್ ‘ ನಿತೀನ್  ಹಾಗೂ  ವೆಂಕಟೇಶ್ ನನ್ನು ಬಂಧಿಸಿದ್ದಾರೆ .
ಕೆಲ ದಿನಗಳ ಹಿಂದೆ ವೇಣುಗೋಪಾಲ್ ತನ್ನ ಅಕ್ಕನ ಮಗ 7ವರ್ಷದ ಬಾಲಕನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ತರೀಕೆರೆ ಜಗದೀಶ್ವರ ಕ್ಲಿನಿಕ್ ಗೆ  ದಾಖಲಿಸಿದ್ದ.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ದಿದ್ದು ಬಾಲಕ ಮೃತಪಟ್ಟಿದ್ದ .
ಇದರಿಂದ  ರೊಚ್ಚಿಗೆದ್ದ ವೇಣುಗೋಪಾಲ್ ಸ್ನೇಹಿತರೊಂದಿಗೆ ಸೇರಿ   ವೈದ್ಯರ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದ ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.

Post a Comment

Previous Post Next Post