ಕೋವಿಡ್ ಸೇವಾ ಕೇಂದ್ರ ಉದ್ಘಾಟನೆ

 ಹಾಸನ ಜೂ.01:- ಹಿಮ್ಸ್ನಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರನ್ನು ಆರೈಕೆ ಮಾಡುವ ಸಂಬAಧಿಕರು ಉಳಿದುಕೊಳ್ಳಲು ಹಾಗೂ ಉಚಿತ ಊಟದ ವ್ಯವಸ್ಥೆ ಮಾಡಿರುವುದು ಉತ್ತಮ ಕಾರ್ಯ ಎಂದು ಶಾಸಕರಾದ ಪ್ರೀತಂ ಜೆ.ಗೌಡ ಅವರು ತಿಳಿಸಿದ್ದಾರೆ.


 

 ನಗರದಲ್ಲಿ ಹಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಫೀಸ್ ಕಟ್ಟಡದಲ್ಲಿಂದು ರಾಷ್ಟಿçÃಯ ಸ್ಪಯಂ ಸೇವಕ ಸಂಘ ,ಶ್ರೀ ಜನಜಾಗರಣ ಟ್ರಸ್ಟ್ ರಿ.ಸೇವಾ ಭಾರತಿ, ವತಿಯಿಂದ ಏರ್ಪಡಿಸಿದ್ದ ಕೋವಿಡ್ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟಿçÃಯ ಸ್ವಯಂ ಸೇವಾ ಸಂಘ ಕೋವಿಡ್ ನಿರ್ವಹಣೆಗೆ ಹೆಚ್ಚಿನ ಸೇವೆ ನೀಡುತ್ತಿದೆ ಎಂದರು.

 ಜಿಲ್ಲಾ ಆಸ್ಪತ್ರೆಗೆ ಕೋವಿಡ್ ಸೋಂಕಿತರ ಉಪಚಾರಕ್ಕಾಗಿ ದೂರದ ಊರುಗಳಿಂದ ಬಂದAತಹ ರೋಗಿಗಳ ಸಂಬAಧಿಕರು ಉಚಿತವಾಗಿ ವಸತಿ ವ್ಯವಸ್ಥೆ ಸಹಿತ 3 ಹೊತ್ತು ಊಟ, 2 ಹೊತ್ತು ಕಶಾಯ, ಸ್ನಾನ-ಶೌಚಾಲಯ ವ್ಯವಸ್ಥೆ, ಕುಡಿಯಲು ಬಿಸಿನೀರು ವ್ಯವಸ್ಥೆಯ ಮಾಡಿದೆ ಎಂದು ಶಾಸಕರು ತಿಳಿಸಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಹಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಸಂಬAಧಿಕರ ಸಂಕಷ್ಟ ಅರಿತು ಈ ರೀತಿಯ ವ್ಯವಸ್ಥೆಯನ್ನು ಮಾಡಿರುವುದು ಉತ್ತಮ ಎಂದರು.

 ಸುಮಾರು 45 ಬೆಡ್ ಉಚಿತ ಊಟದ ವ್ಯವಸ್ಥೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಡಿರುವರು ಮೆಚ್ಚುಗೆಯ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

  ಜಿಲ್ಲೆಯಲ್ಲಿ ಕೋವಿಡ್ ಇಳಿಮುಖವಾಗುತ್ತಿದೆ ಪಾಸಿಟಿವಿಟಿ ಸಂಪೂರ್ಣ ತಗ್ಗುವ ವರೆಗೂ ನಿರ್ಲಕ್ಷ÷್ಯ ತೋರದೆ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು. 

 ಕೋವಿಡ್ ಸೋಂಕು ತಡೆಗಟ್ಟಲು ಜನಪ್ರತಿನಿಧಿಗಳ ಸಹಕಾರದೊಂದಿಗೆ ಕೊರೋನಾ ಸೋಂಕಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

 ಈ ವೇಳೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಆರ್ ಎಸ್ ಎಸ್ ನ ವಿಭಾಗ ಕಾರ್ಯವಾಹ ವಿಜಯ್ ಕುಮಾರ್, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ ಹಾಗೂ ಮತ್ತಿತರರು ಹಾಜರಿದ್ದರು.

Post a Comment

Previous Post Next Post