ಬೇಲೂರಿನಲ್ಲಿ ಅರ್ಥಪೂರ್ಣವಾಗಿ ಜರುಗಿದ ರೇಣುಕಾ ಎಲ್ಲಮ್ಮದೇವಿ ಜಾತ್ರೆ

ಬೇಲೂರು : ಇಲ್ಲಿನ ಚನ್ನಾಪುರ ಗ್ರಾಮದ ಬಳಿ ಇರುವ ಶ್ರೀರೇಣುಕಾ ಯಲ್ಲಮ್ಮ ದೇವಿ ಜಾತ್ತಾಮಹೋತ್ಸವವು ಅರ್ಥಪೂರ್ಣವಾಗಿ ಜರುಗಿತು.

ಬೇಲೂರಿನ ರೇಣುಕಾಎಲ್ಲಮ್ಮದೇವಿ ಜಾತ್ರಾ ಮಹೋತ್ಸವ ಅರ್ಥಪೂರ್ಣವಾಗಿ ಜರುಗಿತು


ಜಾತ್ರಾಮಹೋತ್ಸವದ ಪ್ರಯುಕ್ತ ದೇವಿಗೆ ಅಭಿಷೇಕ, ಪುಷ್ಪಾಲಂಕಾರದೊAದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಂಜಾನೆಯೆ ದೇವರ ಭಕ್ತರು ಕರೆಯಿಂದ ಗಂಗೆಯನ್ನು ಕಳಸದೊಂದಿಗೆ ಹೊತ್ತುತಂದು ಪೂಜೆ ಸಲ್ಲಿಸಿದರು.

       ಕೊರೊನಾ ಕಾರಣದಿಂದ ಸುಮಾರು ಐದು ವರ್ಷಗಳಿಂದ ದೇವಿಗೆ ಹರಕೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗಿರಲಿಲ್ಲ. ಹೋಮ-ಹವನವನ್ನು ಮಾಡಿ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭ ಪ್ರಧಾನ ಅರ್ಚಕರಾದ ಕುಮಾರ್, ಬಿ.ವೈ.ಜಗದೀಶ್, ಲಕ್ಷ್ಮಿಶ್ರೀನಿವಾಸ್, ಚೈತ್ರಜಗದೀಶ್, ರಾಗಿಣಿವೆಂಕಟೇಶ್, ದಿವ್ಯತೀರ್ಥಕುಮಾರ್, ಲತಾಲೋಕೇಶ್,  ವಿಶಾಲ್, ಜೀವನ್ ಇತರರು ಇದ್ದರು.

Post a Comment

Previous Post Next Post