ಪಟ್ಟಣದ ಹನುಮಂತ ನಗರದದಲ್ಲಿರುವ ಮುರರ್ಜಿ ವಸತಿ ಶಾಲೆಯಲ್ಲಿರುವ ಕೋವೀಡ್ ಸೊಂಕಿತರಿಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಹೆಚ್ ಕೆ ಸುರೇಶ್ ವತಿಯಿಂದ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಎಪಿಎಂಸಿ ನಾಮಿನಿ ಸದಸ್ಯ ಪೈಂಟ್ ರವಿ ಮಾತನಾಡಿ ಕಳೆದ ಎರಡು ತಿಂಗಳಿನಿಂದ ದೇಶವ್ಯಾಪ್ತಿ ಕೊರೋನಾ ವೈರಸ್ ಹರಡಿ ಹಲವಾರು ಸಾವು ನೋವುಗಳನ್ನು ಕಂಡಿದ್ದೇವೆ.ಅದರಂತೆ ಇದರ ಬಗ್ಗೆ ತಾತ್ಸಾರ ಮಾಡದೆ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಪಡೆಯಬೇಕು.ರ್ಕಾರ ಕೋವೀಡ್ ಸಂಕಷ್ಟ ದಲ್ಲಿರುವವರಿಗೆ ಹಲವಾರು ಯೋಜನೆಗಳನ್ನು ತಂದಿದ್ದು ಅದರಲ್ಲೂ ಸಂಘಸಂಸ್ಥೆಗಳು,ದಾನಿಗಳು ಮುಂದೆ ಬಂದು ಇಂತಹವರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.
ನಂತರ ಓಬಿಸಿ ಜಿಲ್ಲಾಘಟಕದ ಕರ್ಯರ್ಶಿ ಚೇತನ್ ಕುಮಾರ್ ಮಾತನಾಡಿ ಲಾಕ್ ಡೌನ್ ಸಮಯದಲ್ಲಿ ಜನಸಾಮಾನ್ಯರ ಜೀವನ ಸಂಕಷ್ಟದಲ್ಲಿದೆ ಎಂಬುವುದು ನಮಗೆ ತಿಳಿದಿದೆ.ನಿಮ್ಮ ಜೊತೆ ಯಾವಾಗಲೂ ಸದಾ ಜೊತೆಗಿರುತ್ತೇವೆ.ನರೇಂದ್ರ ಮೋದಿ ಬಿಜೆಪಿ ರ್ಕಾರ ಉತ್ತಮ ಆಡಳಿತ ಮಾಡುತ್ತಿದ್ದು ಇದನ್ನು ಸಹಿಸದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈ ಪರಚಿಕೊಂಡು ಇಲ್ಲ ಸಲ್ಲದ ಅಪವಾದ ಮಾಡುತ್ತಿರುವುದು ಸರಿಯಲ್ಲ.ಅದರಲ್ಲೂ ಇನ್ನೂ ಚುನಾವಣೆ ನಡೆಯಲು ಎರಡು ಮೂರು ರ್ಷ ಬಾಕಿ ಇರುವಾಗಲೇ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ರ್ಚೆಯನ್ನು ಈಗಲೇ ನೆಡೆಸುತ್ತಿದ್ದಾರೆ.ಇವರಿಗೆ ರಾಜ್ಯದ ಹಿತಕ್ಕಿಂತ ಕರ್ಚಿಯ ಆಸೆಯೇ ಜೋರಾಗಿದೆ.ಹಗಲು ಕನಸು ಕಾಣುವುದನ್ನು ಮೊದಲು ಬಿಡಬೇಕು ಎಂದರು.
ಈ ಸಂರ್ಭದಲ್ಲಿ ಪುರಸಭೆ ಸದಸ್ಯ ಪ್ರಭಾಕರ್, ನಗರ ಅಧ್ಯಕ್ಷ ವಿನಯ್, ಕರ್ಯರ್ತರಾದ ವಿಜಯಲಕ್ಷ್ಮೀ,ಪುಷ್ಪಾ, ರಂಗನಾಥ್,ಜಗದೀಶ್,ನಿಖಿಲ್ ಹಾಜರಿದ್ದರು.